Select Your Language

Notifications

webdunia
webdunia
webdunia
webdunia

ಭಾರಿ ಮಳೆಗೆ ಕೊಚ್ಚಿಹೋಯ್ತು ಸೇತುವೆ..!

ಭಾರಿ ಮಳೆಗೆ  ಕೊಚ್ಚಿಹೋಯ್ತು ಸೇತುವೆ..!
ರಾಮನಗರ , ಮಂಗಳವಾರ, 2 ಆಗಸ್ಟ್ 2022 (18:00 IST)
ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಮೆಳೇಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆ ಕೊಚ್ಚಿ ಹೋಗಿದೆ.ಕಳೆದ 6 ತಿಂಗಳ ಹಿಂದೆ 18 ಲಕ್ಷ ಖರ್ಚು ಮಾಡಿ ಅಧಿಕಾರಿಗಳು ಸೇತುವೆ ನಿರ್ಮಿಸಿದ್ದರು.ಇದೀಗ ನಿರಂತರ ಮಳೆಯಿಂದಾಗಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿಹೋದ ಹಿನ್ನೆಲೆ ಹತ್ತಾರು ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ.

ಅರಳಿಮರದೊಡ್ಡಿ, ಅಂಕನಹಳ್ಳಿ, ಹುಣಸೆದೊಡ್ಡಿ, ಜಾಲಮಂಗಲ, ತಡಿಕವಾಗಿಲು ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಟ್ ಆಗಿದೆ.18 ಲಕ್ಷ ಖರ್ಚು ಮಾಡಿ ಸೇತುವೆ ನಿರ್ಮಿಸಿದ್ರೂ ಪ್ರಯೋಜನವಿಲ್ಲ..ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆರೋಪ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಡ್ಡ ಕುಸಿತದಿಂದ ನಾಲ್ವರ ಜೀವಂತಸಾವು...!