Select Your Language

Notifications

webdunia
webdunia
webdunia
webdunia

ಸುಮಲತಾ-ಜೆಡಿಎಸ್ ನಾಯಕರ ನಡುವೆ ಈಗ ಕ್ಷಮೆಗಾಗಿ ಪಟ್ಟು

ಸುಮಲತಾ-ಜೆಡಿಎಸ್ ನಾಯಕರ ನಡುವೆ ಈಗ ಕ್ಷಮೆಗಾಗಿ ಪಟ್ಟು
ಬೆಂಗಳೂರು , ಭಾನುವಾರ, 11 ಜುಲೈ 2021 (09:50 IST)
ಬೆಂಗಳೂರು: ಸುಮಲತಾ-ಎಚ್ ಡಿಕೆ ನಡುವಿನ ಜಟಾಪಟಿ ಈಗ ಕ್ಷಮೆ ಯಾಚನೆಗೆ ಪಟ್ಟು ಕೇಳುವವರೆಗೆ ಬಂದು ನಿಂತಿದೆ.

 

ಇಬ್ಬರ ನಡುವಿನ ಜಟಾಪಟಿ ವೇಳೆ ರೆಬಲ್ ಸ್ಟಾರ್ ಅಂಬರೀಶ್, ಅವರ ಸಾವಿನ ಬಳಿಕ ನಡೆದ ಘಟನೆಗಳ ಪ್ರಸ್ತಾಪವಾಗಿತ್ತು. ಇದರಿಂದ ಅಂಬಿ ಅಭಿಮಾನಿಗಳಿಗೆ ತೀವ್ರ ಬೇಸರವಾಗಿತ್ತು. ಈ ವಿಚಾರವಾಗಿ ಸುಮಲತಾ ಕ್ಷಮೆ ಕೇಳಿ ಪ್ರಕರಣಕ್ಕೆ ಇತ್ಯರ್ಥ ಹಾಡಬೇಕು ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ಟಿ ಶರವಣ ಹೇಳಿದ್ದರು.

ಈ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಸುಮಲತಾ ನನಗೆ ನನ್ನ ಜವಾಬ್ಧಾರಿ ಗೊತ್ತಿದೆ. ಟಿ ಶರವಣ ಯಾರೆಂದೇ ಗೊತ್ತಿಲ್ಲ. ರವೀಂದ್ರ ಶ್ರೀಕಂಠಯ್ಯ ಹೇಳಿದಂತೆ ಕೇಳಲು ಆಗಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ಅವರೇ ಕ್ಷಮೆ ಕೇಳಿ ಪ್ರಕರಣಕ್ಕೆ ಅಂತ್ಯ ಹಾಡಲಿ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಟವಾಡಲು ಹೋಗಿದ್ದಕ್ಕೆ ಮಗಳ ಕೈ ಸುಟ್ಟ ತಾಯಿ