Webdunia - Bharat's app for daily news and videos

Install App

ಪ್ರಜ್ವಲ್ ರೇವಣ್ಣ ಒಳ್ಳೆಯ ಹುಡುಗ, ಏನೂ ಗೊತ್ತಿಲ್ಲ: ಬಡ್ಡಿ ಸಮೇತ ತಿರುಗಿಸಿ ಕೊಡ್ತೇನೆ ಎಂದ ಎಚ್ ಡಿ ರೇವಣ್ಣ

Krishnaveni K
ಶುಕ್ರವಾರ, 20 ಸೆಪ್ಟಂಬರ್ 2024 (10:34 IST)
ಹಾಸನ: ಒಂದೆಡೆ ಮಗನ ಮೇಲಿನ ಆರೋಪ, ತಮ್ಮ ಮೇಲೂ ಕೇಸ್. ರಾಜಕೀಯವಾಗಿ ಎಚ್ ಡಿ ರೇವಣ್ಣ ತೀರಾ ಕುಗ್ಗಿ ಹೋಗಿದ್ದಾರೆ. ಈಗ ಎಲ್ಲದಕ್ಕೂ ಬಡ್ಡಿ ಸಮೇತ ವಾಪಸ್ ಕೊಡ್ತೀನಿ ಎಂದಿದ್ದಾರೆ.

ಆಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಎಚ್ ಡಿ ರೇವಣ್ಣ, ಇನ್ನು ಮೂರು ವರ್ಷ ಕಾಯಿರಿ, ನನಗೆ ಕೊಟ್ಟಿದ್ದಕ್ಕೆಲ್ಲಾ ಬಡ್ಡಿ ಸಮೇತ ತೀರಿಸ್ತೀನಿ. ಇಲ್ಲ ಅಂದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಎಚ್ ಡಿ ರೇವಣ್ಣ ಕಾರ್ಯಕರ್ತರ ಮುಂದೆ ಶಪಥ ಮಾಡಿದ್ದಾರೆ.

‘ಏನಾಗುತ್ತದೇ ಕೆಲವೊಂದು ಪ್ರಜ್ವಲ್ ಗೂ ಗೊತ್ತಾಗಲ್ಲ. ಒಳ್ಳೆಯ ಹುಡುಗ ಅವನು. ಮೂರು ವರ್ಷ ಸುಮ್ಮನಿರಿ. ಅದೇನು ನ್ಯಾಯಾಲಯ ಮಾಡುತ್ತದೋ ಮಾಡಲಿ. ಆಮೇಲೆ ಎಲ್ಲದಕ್ಕೂ ಬಡ್ಡಿ ಸಮೇತ ತೀರಿಸ್ತೀನಿ. ಇಲ್ಲಾಂದ್ರೆ ದೇವೇಗೌಡರ ಮಗನೇ ಅಲ್ಲ ನಾನು’ ಎಂದಿದ್ದಾರೆ.

‘ದೇವೇಗೌಡರು, ಕುಮಾರಣ್ಣ, ರೇವಣ್ಣ ಎಲ್ಲಾ ನಿಮ್ಮಂತಹ ಪುಣ್ಯವಂತರಿಂದ ಉಳಿದಿದ್ದಾರೆ. ಪಾಪ ಪ್ರಜ್ವಲ್ ಗೂ ಏನೂ ಗೊತ್ತಾಗಲ್ಲ. ನಮ್ಮ ದುಡ್ಡು ತಗೊಂಡು ಬೇರೆಲ್ಲೋ ಹಾಕಿದ್ದರು. ಅವರೆಲ್ಲಾ ನನ್ನ ಕೈಗೆ ಸಿಗದೇ ಎಲ್ಲಿಗೆ ಹೋಗ್ತಾರೆ. ಎಲ್ಲದಕ್ಕೂ ಮೂರು ವರ್ಷ ಕಾಯಿರಿ. ಆಮೇಲೆ ಎಲ್ಲದಕ್ಕೂ ಬಡ್ಡಿ ಸಮೇತ ತಿರಿಸ್ತೀನಿ’ ಎಂದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments