Select Your Language

Notifications

webdunia
webdunia
webdunia
webdunia

ನವೆಂಬರ್ ಕ್ರಾಂತಿ ಬಿಸಿ ನಡುವೆ ಹೊಸ ಬಾಂಬ್ ಸಿಡಿಸಿದ ಎಚ್ ಡಿ ಕುಮಾರಸ್ವಾಮಿ

HD Kumaraswamy

Sampriya

ಬೆಂಗಳೂರು , ಶನಿವಾರ, 22 ನವೆಂಬರ್ 2025 (18:03 IST)
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಐಕತ್ವ ಬದಲಾವಣೆ ಚರ್ಚೆ ಜೋರಾಗಿರುವಾಗ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಕ್ರಾಂತಿ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ  ರೀತಿಯಲ್ಲಿ ರಾಜ್ಯದಲ್ಲಿ ಬೆಳವಣಿಗೆಯಾಗಲಿದೆ ಎಂದರು. 

ಜೆಡಿಎಸ್‌ ರಜತಮಹೋತ್ಸವದ ಅಂಗವಾಗಿ ಇಂದು ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿ ಎದುರು ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕ ಸಂಪದ್ಭರಿತವಾದ  ರಾಜ್ಯ. ಕಳೆದ 25-30 ವರ್ಷಗಳಲ್ಲಿ ದೇಶದ ಕೊಡುಗೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿತ್ತು. ಆದರೆ ಇದೀಗ ರಾಜ್ಯದ ಸಾಲದ ಪ್ರಮಾಣ ₹7.5 ಲಕ್ಷ ಕೋಟಿ ಆಗಿದೆ. ಈ ಸಾಲದಲ್ಲಿ ಸಿದ್ದರಾಮಯ್ಯ ಅವರ ಪಾಲು ₹5.5 ಲಕ್ಷ ಕೋಟಿ ಆಗಿದೆ. 

ಈ ನಾಡಿನ ಮೇಲೆ ಇಷ್ಟು ಸಾಲ ಹೊರಿಸಿದ್ದಾರೆ. ಈಗಾಗಲೇ ಬೇರಸತ್ತಿರುವ ಜನ ಸರ್ಕಾರವನ್ನು ಕೊತ್ತೊಗೆಯಲು ಕಾಯುತ್ತಿದ್ದಾರೆ. ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ರೀತಿ ಬೆಳವಣಿಗೆಗಳು ರಾಜ್ಯದಲ್ಲಿ ಆಗುವ ಸಾಧ್ಯತೆಯಿದೆ ಅಂತ ಹೊಸ ಕ್ರಾಂತಿಯ ಬಾಂಬ್‌ ಸಿಡಿಸಿದರು.

ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ಕೊಟ್ಟಿದ್ದೇನೆ ಅಂತಾರೆ. ಅವರ ಗ್ಯಾರಂಟಿ (Guarantee Scheme) ಕಾರ್ಯಕ್ರಮ ಜನರ ಜೀವನಕ್ಕೆ ಶಕ್ತಿ ತುಂಬುತ್ತಿಲ್ಲ. 

Share this Story:

Follow Webdunia kannada

ಮುಂದಿನ ಸುದ್ದಿ

ORS ಬ್ರ್ಯಾಂಡ್‌ನ ಪೇಯಗಳನ್ನು ಹಿಂಪಡೆಯಲು FSSAI ಸೂಚನೆ