Publish Date: Sun, 28 Jan 2024 (18:34 IST)
Updated Date: Sun, 28 Jan 2024 (18:42 IST)
ಬೆಂಗಳೂರು :ನಿರ್ದೇಶಕ ಮಂಜುನಾಥ್ ಕೇಶವ ರೆಡ್ಡಿ ವಿರುದ್ದ ವರದಕ್ಷಿಣೆ, ಕಿರುಕುಳದ ಆರೋಪದ ಮೇಲೆ ಅವರ ಪತ್ನಿ ಅಖಿಲಾ ದೂರು ದಾಖಲಿಸಿದ್ದಾರೆ. ಪತಿ ಮುನ್ಸೋರೆ, ಅವರ ತಾಯಿ ಹಾಗೂ ಸೋದರಿ ತನಗೆ ದೈಹಿಕ ಹಲ್ಲೆ ಮಾಡಿರುವುದಾಗಿ ಅಖಿಲಾ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕನ್ನಡದಲ್ಲಿ ನಾತಿಚರಾಮಿ, 19.20.21 ಮತ್ತು ಹರಿವು ಸಿನಿಮಾಗಳ ಮೂಲಕ ಮನ್ಸೋರೆ ಪ್ರಸಿದ್ದರಾಗಿದ್ದರು. ಈ ಸಿನಿಮಾಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳೂ ಲಭ್ಯವಾಗಿತ್ತು.
2021 ರಲ್ಲಿ ಮನ್ಸೋರೆ ಅಖಿಲಾರನ್ನು ವರಿಸಿದ್ದರು. 1.5 ಕೆಜಿ ಬೆಳ್ಳಿ, ಚಿನ್ನಾಭರಣಗಳನ್ನು ಮದುವೆಯಲ್ಲಿ ನೀಡಲಾಗಿತ್ತು. ಆದರೂ ಸಹ ಹಣ ತರುವಂತೆ ಮತ್ತು ಎಕ್ಸ್ಯುವಿ ಕಾರು ಕೊಡಿಸುವಂತೆ ಪತಿ ಹಾಗೂ ಅತ್ತೆ ತನ್ನನ್ನು ಪೀಡಿಸುತ್ತಿದ್ದರು ಎಂದು ಅಖಿಲಾ ದೂರಿನಲ್ಲಿ ತಿಳಿಸಿದ್ದಾರೆ.