Publish Date: Tue, 02 Jan 2024 (21:00 IST)
Updated Date: Tue, 02 Jan 2024 (20:03 IST)
ತಾಳಿ ಕಟ್ಟುವ ಸಮಯದಲ್ಲಿ ವರದಕ್ಷಿಣೆ ಹಣಕ್ಕೆ ಬೇಡಿಕೆಯಿಟ್ಟ ವರನೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ಖಾನಾಪುರದಲ್ಲಿ ಭಾನುವಾರ ನಡೆದಿದೆ. ಧಾರವಾಡ ನಿವಾಸಿ , ಸರ್ಕಾರಿ ಉದ್ಯೋಗ ವಿಠ್ಠಲ ಪಾಟೀಲ ಬಂಧಿತ ಆರೋಪಿ. ಕಳೆದ ಮೇ ತಿಂಗಳಲ್ಲಿ ನಿಶ್ಚಿತಾರ್ಥವಾಗಿದ್ದು, ಡಿ. 31 ರಂದು ವಿವಾಹ ನಿಶ್ಚಯವಾಗಿತ್ತು.
ಆದರೆ ಮದುವೆ ಮಂಟಪದಲ್ಲಿ ಕಿರಿಕ್ ತೆಗೆದ ವರ 10 ಲಕ್ಷ ರೂ. ವರದಕ್ಷಿಣೆ ಹಾಗೂ 100 ಗ್ರಾಂ ಚಿನ್ನಕ್ಕೆ ಬೇಡಿಕಯಿಟ್ಟಿದ್ದ. ವರದಕ್ಷಿಣೆ ಕೊಡದಿದ್ದರೆ ಮದುವೆ ಆಗುವುದಿಲ್ಲ ಎಂದು ಹಠ ಹಿಡಿದಿದ್ದ. ವರನ ಮನವೊಲಿಸುವಲ್ಲಿ ವಿಫಲವಾರ ವಧುವಿನ ಮನೆಯವರು ಬೇಸತ್ತು, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವರನನ್ನು ವಶಕ್ಕೆ ಪಡೆದು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಪೊಲೀಸರು ನ್ಯಾಯಾಧೀಶರ ಸೂಚನೆ ಮೇರೆಗೆ ಆರೋಪಿ ವರನನ್ನು ಬೆಳಗಾವಿ ಜಿಲ್ಲಾ ಕಾರಾಗೃಹಕ್ಕೆ ರವಾನಿಸಿದ್ದಾರೆ.