Select Your Language

Notifications

webdunia
webdunia
webdunia
webdunia

ಸಚಿವ ಬಿ.ಶ್ರೀರಾಮುಲು ಹೆಸರಲ್ಲಿ ಅಧಿಕಾರಿಗಳಿಂದ ಹಫ್ತಾ ವಸೂಲಿ?

ಸಚಿವ ಬಿ.ಶ್ರೀರಾಮುಲು ಹೆಸರಲ್ಲಿ ಅಧಿಕಾರಿಗಳಿಂದ ಹಫ್ತಾ ವಸೂಲಿ?
ರಾಯಚೂರು , ಶನಿವಾರ, 14 ಡಿಸೆಂಬರ್ 2019 (16:09 IST)
ಬಿಜೆಪಿ ಪ್ರಭಾವಿ ನಾಯಕ ಹಾಗೂ ಸಚಿವ ಬಿ.ಶ್ರೀರಾಮುಲು ಹೆಸರಲ್ಲಿ ಅಧಿಕಾರಿಗಳೇ ಅಧಿಕಾರಿಗಳಿಂದ ಹಫ್ತಾ ವಸೂಲಿಗೆ ಇಳಿದಿದ್ದಾರೆ.

ಇಂಥದ್ದೊಂದು ಆರೋಪ ಅಧಿಕಾರಿಗಳ ವಲಯದಿಂದ ಕೇಳಿಬರಲಾರಂಭಿಸಿದೆ. ರಾಜಶೇಖರ್, ಶಿವಶರಣ, ಚಿಂತನ್ ಹಾಗೂ ಬಸವರಾಜ್ ಎನ್ನೋದು ಅಧಿಕಾರಿಗಳಿಗೆ ಕರೆ ಮಾಡಿ ಹಫ್ತಾಕ್ಕೆ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ.

ತಾವು ಸಚಿವರ ಆಪ್ತ ವಲಯದ ಅಧಿಕಾರಿಗಳು. ನಮಗೆ ರಾಯಚೂರು ಜಿಲ್ಲೆಯ ಜವಾಬ್ದಾರಿ ಕೊಟ್ಟಿದ್ದಾರೆ. ಹೀಗಂತ ಹೇಳೋ ಮೂಲಕ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕರೆ ಮಾಡಿ ಹಫ್ತಾಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ ಅನ್ನೋ ಸುದ್ದಿ ಹರಿದಾಡಲಾರಂಭಿಸಿದೆ.

ಸಚಿವರೇ ಮುಂದಾಗಿ ತಪ್ಪಿತಸ್ಥರ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಕೆಲವು ಅಧಿಕಾರಿಗಳು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಬದ್ಧ ವೈರಿಗಳು