Publish Date: Sat, 17 Sep 2022 (20:34 IST)
Updated Date: Sat, 17 Sep 2022 (20:37 IST)
ಹಾವೇರಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಪಚಿತರನನ್ನ ಥಳಿಸಿದ ಘಟನೆ ನಡೆದಿದೆ. ಬಂಕಾಪುರ, ಶಿಗ್ಗಾಂವ್, ದೇವಗಿರಿ ಗ್ರಾಮಕ್ಕೆ ಬಂದ ಅಪರಿಚಿತರನ್ನು ಸ್ಥಳೀಯರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವುದು ಸುಳ್ಳು ವದಂತಿ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ರು. ಮಕ್ಕಳ ಕಳ್ಳತನದ ಬಗ್ಗೆ ಎಲ್ಲಿಯೂ ಪ್ರಕರಣ ದಾಖಲಾಗಿಲ್ಲ. ಅಪರಿಚಿತರು ಕಂಡಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ರು. ಮಾಧ್ಯಮಗಳಲ್ಲಿ ಸುಳ್ಳು ವದಂತಿಗಳಿಗೆ ಕಿಡಿ ಗೊಡಬೇಡಿ ಎಂದು ಎಷ್ಟೇ ಮಾಹಿತಿ ನೀಡಿದ್ರು ಸಹ ಜನರು ಜಾಗೃತರಾಗಿಲ್ಲದಿರುವುದು ಬೇಸರದ ಸಂಗತಿ.