Webdunia - Bharat's app for daily news and videos

Install App

ಗ್ರೀನ್ ಕಾರಿಡಾರ್ ಹೆದ್ದಾರಿ ಕಲಬುರಗಿ ನಗರದಿಂದ ಹಾದು ಹೋಗಲಿ ಎಂದ ಖರ್ಗೆ

Webdunia
ಶುಕ್ರವಾರ, 9 ನವೆಂಬರ್ 2018 (19:39 IST)
ಉದ್ದೇಶಿತ ಮುಂಬೈ-ಚೆನ್ನೈ ಗ್ರೀನ್ ಕಾರಿಡಾರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯೋಜಿಸಿದೆ. ಈ ಹೆದ್ದಾರಿ ಕಲಬುರಗಿ ಮತ್ತು ಯಾದಗಿರಿ ನಗರಗಳಿಗೆ ಹೊಂದಿಕೊಂಡು ಹಾಯ್ದು ಹೋಗಿದಲ್ಲಿ ಈ ನಗರಗಳ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಹಾಗೂ ಕಲಬುರಗಿ ಸಂಸದ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.   

ಕಲಬುರಗಿಯ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೈಗಾರಿಕೋದ್ಯಮಕ್ಕೆ ತುಂಬಾ ಅನುಕೂಲವಾಗಲಿರುವ ಉದ್ದೇಶಿತ ಈ ಗ್ರೀನ್ ಕಾರಿಡಾರ್ ಯೋಜನೆಗೆ ಸಧ್ಯ ಡಿ.ಪಿ.ಆರ್. ಕಾರ್ಯ ನಡೆಯುತ್ತಿದೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ 162 ಕಿ.ಮಿ. ಹೆದ್ದಾರಿ ಹಾದು ಹೋಗಲಿದೆಯಾದರು ಇವೆರಡು ನಗರಗಳಿಗೆ ಹಾದು ಹೋಗುತ್ತಿಲ್ಲ್ಲ. ಇವೆರಡು ನಗರಗಳ ಮೂಲಕ ಹಾದು ಹೋಗಿದಲ್ಲಿ ಈ ಜಿಲ್ಲೆಗಳ ಅಭಿವೃದ್ಧಿಗೆ ನೆರವಾಗಲಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದರು.

ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬರುವ ಕಲಬುರಗಿ ನಗರದ ರಿಂಗ್ ರಸ್ತೆಗೆ ಮೊದಲ ಆದ್ಯತೆ ಕೊಟ್ಟು ಕಾಮಗಾರಿ ಬೇಗ ಪೂರ್ಣಗೊಳಿಸಿ. ಇದೇ ಹೆದ್ದಾರಿಯಲ್ಲಿ ಬರುವ ಕಲಬುರಗಿ-ಹುಮನಾಬಾದ ಮಧ್ಯದ ಹಳ್ಳಿಖೇಡ್ ಬಳಿ ರಸ್ತೆ ಚಿಕ್ಕದಾಗಿದೆ. ಅಗತ್ಯವಿದ್ದಲ್ಲಿ ರಸ್ತೆ ಬದಿಯಲ್ಲಿನ ಮನೆ, ಅಂಗಡಿಗಳನ್ನು ತೆರವುಗೊಳಿಸಿ ಅವರಿಗೆ ಸೂಕ್ತ ಪರಿಹಾರ ಕಲ್ಪಿಸಿ ನಿಗದಿತ ಅಳತೆಯಲ್ಲಿಯೆ ರಸ್ತೆ ನಿರ್ಮಿಸಬೇಕು ಹಾಗೂ ಅಲ್ಲಲ್ಲಿ ಗುಂಡಿಗಳ ಬಿದ್ದಿದ್ದು, ಅದನ್ನು ಮುಚ್ಚಿಸಬೇಕು. ಅಲ್ಲದೆ ಕುರಿಕೋಟಾ ಸೇತುವೆ ಮೇಲಿನ ರಸ್ತೆ ತುಂಬಾ ಕೆಟ್ಟಿದ್ದು, ಕೂಡಲೆ ಸುಧಾರಣೆ ಕೆಲಸ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾನು ಮುಪ್ತಾಕ್‌ ಕುಂಕುಮ ಹಚ್ಚಲಿ ಎನ್ನುವುದು ತರವಲ್ಲ: ಸಿಎಂ ಸಿದ್ದರಾಮಯ್ಯ

ಆಕೆ ಈಗಿಲ್ಲ, ಆದರೂ ಗುರಿಯಾಗಿದ್ದಾಳೆ: ತಾಯಿ ಬಗೆಗಿನ ನಿಂದನೆಗೆ ಮೋದಿ ಭಾವುಕ

ಜನರ ಕಷ್ಟಕ್ಕೆ ದುಡ್ಡಿಲ್ಲ, ಸರ್ಕಾರಕ್ಕೆ ಹೆಲಿಕಾಪ್ಟರ್ ಚಿಂತೆ: ಬಿವೈ ವಿಜಯೇಂದ್ರ

ಟೇಕ್ ಆಫ್ ಕೆಲ ನಿಮಿಷದಲ್ಲಿ ಪಕ್ಷಿ ಡಿಕ್ಕಿ, ನಾಗ್ಪುರಕ್ಕೆ ವಾಪಾಸ್ಸಾದ ಇಂಡಿಗೋ ವಿಮಾನ

ಪಕ್ಷ ಚಟುವಟಿಕೆ ಆರೋಪ: ಬಿಆರ್‌ಎಸ್ ಎಂಎಲ್‌ಸಿ ಕವಿತಾ ಬಿಗ್ ಶಾಕ್

ಮುಂದಿನ ಸುದ್ದಿ
Show comments