Select Your Language

Notifications

webdunia
webdunia
webdunia
webdunia

ಖರ್ಗೆ ಸ್ವಾಗತಕ್ಕೆ ಕೈ ನಾಯಕರಿಂದ ಭರ್ಜರಿ ಸಿದ್ಧತೆ

ಖರ್ಗೆ ಸ್ವಾಗತಕ್ಕೆ ಕೈ ನಾಯಕರಿಂದ ಭರ್ಜರಿ ಸಿದ್ಧತೆ
bangalore , ಶನಿವಾರ, 5 ನವೆಂಬರ್ 2022 (18:34 IST)
ಎಐಸಿಸಿ ಅಧ್ಯಕ್ಷರಾಗಿ‌ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಅವರ ಸ್ವಾಗತಕ್ಕೆ ಕೈ ನಾಯಕರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.ನಾಳೆ ಮಧ್ಯಾಹ್ನ ಕಾಂಗ್ರೆಸ್ ಸರ್ವೋದಯ ಸಮಾವೇಶ ಅರಮನೆ ಮೈದಾನದಲ್ಲಿ  ನಡೆಯಲಿದೆ. ಸ್ವಾಗತ ಸಮಾವೇಶಕ್ಕೆ ಅರಮನೆ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗಿದ್ದು,ಸರ್ವೋದಯ ಸಮಾವೇಶಕ್ಕೆ ಒಂದು ಲಕ್ಷ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ.ಮಳೆ ಹಿನ್ನೆಲೆಯಲ್ಲಿ ಬೃಹತ್ ಶೆಡ್ ನಿರ್ಮಾಣ ಮಾಡಲಾಗಿದೆ.ವೇದಿಕೆ ಮೇಲೆ 100 ಪ್ರಮುಖ ನಾಯಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದ್ದು.ಸಮಾವೇಶದಲ್ಲಿ ಎಐಸಿಸಿ ಪದಾಧಿಕಾರಿಗಳು, ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದೆಂದೂ ಕಾಣದ ವಾಯುಮಾಲಿನ್ಯಕ್ಕೆ ದೆಹಲಿ ತತ್ತರ