Select Your Language

Notifications

webdunia
webdunia
webdunia
webdunia

ಅಪ್ಪು ಭಾವಚಿತ್ರವನ್ನು ಕಿತ್ತೆಸೆದ ಗ್ರಾಮ ಪಂಚಾಯತ್ ಸದಸ್ಯರ ಬಂಧನ

ಅಪ್ಪು ಭಾವಚಿತ್ರವನ್ನು ಕಿತ್ತೆಸೆದ ಗ್ರಾಮ ಪಂಚಾಯತ್ ಸದಸ್ಯರ ಬಂಧನ
ಬೆಂಗಳೂರು , ಶನಿವಾರ, 19 ಮಾರ್ಚ್ 2022 (18:00 IST)
ಗ್ರಾಮ ಪಂಚಾಯತಿ ಸದಸ್ಯರಾದ ಪತ್ರಯ್ಯ ಹಾಗೂ ಶಾಂತಯ್ಯ ಎಂಬುವರು ಪುನೀತ್​ ರಾಜ್​ಕುಮಾರ್​ ಬ್ಯಾನರ್​ ಹಾಗೂ ಕನ್ನಡ ಬಾವುಟವನ್ನು ಕಿತ್ತುಕೊಂಡು ಹೋಗಿ ಕೆರೆಗೆ ಬಿಸಾಡಿದ್ದಾರೆ. ಅಪ್ಪು ಭಾವಚಿತ್ರವುಳ್ಳ ಬ್ಯಾನರ್​ ಕಿತ್ತುಹಾಕಿರೋ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಗ್ರಾಮ ಪಂಚಾಯತ್​ ಸದಸ್ಯ ಪತ್ರಯ್ಯ ಹಾಗೂ ಶಾಂತಯ್ಯರನ್ನು ಪೊಲೀಸರು ಬಂಧಿಸಿದ್ದಾರೆ.
 
ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆಂದು ಜಿಲ್ಲಾಧಿಕಾರಿಗಳು ಹುವಿನಾಳ ಗ್ರಾಮಕ್ಕೆ ಆಗಮಿಸಿದ್ರು ಈ ವೇಳೆ ಅಪ್ಪು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ನಾಮ ಫಲಕ, ಕನ್ನಡ ಬಾವುಟ ಕಿತ್ತು ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಕರಗ ಬಿಬಿಎಂಪಿ ಗ್ರೀನ್ ಸಿಗ್ನಲ್