Webdunia - Bharat's app for daily news and videos

Install App

ಮೋದಿ ನಡುವಳಿಕೆ ಸುಧಾರಿಸಿಕೊಳ್ಳಲಿ ಎಂದ ಗೌಡ್ರು

Webdunia
ಸೋಮವಾರ, 18 ಮಾರ್ಚ್ 2019 (14:24 IST)
ಕಳೆದ ಐದು ವರ್ಷಗಳಲ್ಲಿ ದೇಶದ ವ್ಯವಸ್ಥೆಯಲ್ಲಿ ಹಲವು ಮಾರ್ಪಾಡುಗಳಾಗಿವೆ. ನಾನು ವ್ಯಕ್ತಿಗತವಾಗಿ ಮಾತನಾಡುವುದಿಲ್ಲ. ನರೇಂದ್ರ ಮೋದಿ ತಮ್ಮ‌ ನಡುವಳಿಕೆಯನ್ನ ಸುಧಾರಣೆ ಮಾಡಿಕೊಳ್ಳಬೇಕು. ಹೀಗಂತ ಜೆಡಿಎಸ್ ವರಿಷ್ಠ ಸಲಹೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ನೀಡಿದ್ದು, ಪ್ರಧಾನಿ ಮೋದಿಯವರು ದೇಶವನ್ನ ಎಲ್ಲಿಗೆ ಕೊಂಡ್ಯೊಯಲ್ಲಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ. ಸಂಸತ್ ನಲ್ಲಿ ಹೆಚ್ಚು ಮಾತನಾಡಲು ಅವಕಾಶ ನೀಡಿಲ್ಲ.

ನಮಗೆ  ನಮಗೆ ಸಂಖ್ಯಾ ಬಲ ಇಲ್ಲ ಆದ್ದರಿಂತ ನಮಗೆ ಮಾತನಾಡಲು 2 ರಿಂದ 3 ನಿಮಿಷ ಕಾಲಾವಕಾಶ ನೀಡುತ್ತಾರೆ.
ಮೋದಿ ಪ್ರಧಾನಿಯಾದ ಬಳಿಕ ಬಹುತೇಕ ಎಲ್ಲ ರಾಷ್ಟಗಳಿಗೆ ಹೋಗಿದ್ದಾರೆ. ಈ ಕಾರಣದಿಂದ ನಮ್ಮ ದೇಶದ ವೈರಿ ಯಾರು ಅಂತ ಗುರುತಿಸಲು ಕಷ್ಟವಾಗಿದೆ ಎಂದರು.

ಮೋದಿ ಒಮ್ಮ ಅವರ ತಾಯಿ‌ ಆಶೀರ್ವಾದ ಪಡೆಯಲು ಗುಜರಾತ್ ಗೆ ಹೋಗಿದ್ದರು, ಅವರಿದ್ದ ಸ್ಥಳಕ್ಕೆ ಚೀನಾದ ಅಧ್ಯಕ್ಷರನ್ನ ಕರೆಸಿದ್ದರು.

ನಾನು ಪ್ರಧಾನಿಯಾಗುವುದಕ್ಕೂ ಮುಂಚಿನ ಪ್ರಧಾನಿಗಳು ಯಾರು ಕಾಶ್ಮೀರಕ್ಕೆ ಭೇಟಿ ನೀಡಿರಲಿಲ್ಲ.

ನಾನು ಪ್ರಧಾನಿಯಾದ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿದೆ. ನಾನು ಬರುತ್ತಿದ್ದೇನೆ ಅಂತ ಅಲ್ಲಿನ ರಾಜ್ಯಪಾಲರು ಸೇರಿದಂತೆ ನನಗೆ ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲಿನವರು ಸಾಕಷ್ಟು ಮಂದಿ‌  ಜೀವನವನ್ನ ಸಾಗಿಸುವುದಕ್ಕೆ ಕಷ್ಡವಾಗಿದೆ ಎಂದು ಹೇಳಿದ್ದರು. ಆಗ ನಾನು ಅಲ್ಲಿನ ಸಮಸ್ಯೆಗೆ ಪರಿಹಾರ ಮಾಡಲು ಮುಂದಾಗಿ ರೈಲ್ವೆ ಸೇರಿದಂತೆ ಹಲವು ಯೋಜನೆಗಳನ್ನ ಕಾಶ್ಮೀರಕ್ಕೆ ಕೂಡುಗೆಯನ್ನಾಗಿ ನೀಡಿದೆ ಎಂದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments