Select Your Language

Notifications

webdunia
webdunia
webdunia
webdunia

ಹೆಚ್ಡಿಡಿ ಹಾಸನದಿಂದಲೇ ಸ್ಪರ್ಧಿಸಲಿ ಎಂದ ರೇವಣ್ಣ

ಹೆಚ್ಡಿಡಿ ಹಾಸನದಿಂದಲೇ ಸ್ಪರ್ಧಿಸಲಿ ಎಂದ ರೇವಣ್ಣ
ಬೆಂಗಳೂರು , ಸೋಮವಾರ, 18 ಮಾರ್ಚ್ 2019 (13:07 IST)
ಮಹತ್ವದ ಬೆಳವಣಿಗೆಯೊಂದರಲ್ಲಿ  ಹಾಸನದಿಂದ ದೇವೇಗೌಡ್ರೇ ಸ್ಪರ್ಧೆ ಮಾಡಬೇಕೆಂದು ಸಚಿವ ರೇವಣ್ಣ ಒತ್ತಾಯಿಸಿದ್ದು, ಕುತೂಹಲ ಮೂಡಿಸಿದೆ.

ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರರನ್ನು ಭೇಟಿ ಮಾಡಿದ ಸಚಿವ ಎಚ್.ಡಿ. ರೇವಣ್ಣ ಈ ಒತ್ತಾಯ ಮಾಡಿದ್ದಾರೆ. ಇಂದು ಬೆಳಗ್ಗೆ ದೇವೆಗೌಡರ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ಬಾರಿ ಹಾಸನದಲ್ಲೆ ಸ್ಪರ್ಧೆ ಮಾಡುವಂತೆ ದೇವೇಗೌಡರಿಗೆ ಮನವಿ ಮಾಡಿದರು.

ಹಾಸನದಲ್ಲಿ ಎ.ಮಂಜು ಬಿಜೆಪಿಯಿಂದ ಸ್ಪರ್ಧೆ ವಿಚಾರದಿಂದಾಗಿ ಪ್ರಜ್ವಲ್ ರೇವಣ್ಣಗೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಇದರಿಂದ ತೀವ್ರ ತಲೆಕೆಡಿಸಿಕೊಂಡಿರುವ ರೇವಣ್ಣ. ಈ ಬಾರಿ ದೇವೆಗೌಡರನ್ನೆ ಹಾಸನದಿಂದ ಕಣಕ್ಕಿಳಿಸಲು ಪ್ಲಾನ್ ರೂಪಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಂಜೆ 5 ಗಂಟೆಗೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅಂತ್ಯಸಂಸ್ಕಾರ