Select Your Language

Notifications

webdunia
webdunia
webdunia
webdunia

ಮತ್ತೊಂದು ಸರಕಾರ ರಚನೆಗೆ ರಾಜ್ಯಪಾಲರ ಆಹ್ವಾನ?

ಮತ್ತೊಂದು ಸರಕಾರ ರಚನೆಗೆ ರಾಜ್ಯಪಾಲರ ಆಹ್ವಾನ?
ಚಿಕ್ಕಬಳ್ಳಾಪುರ , ಭಾನುವಾರ, 7 ಜುಲೈ 2019 (18:30 IST)
ರಾಜ್ಯದಲ್ಲಿ ಮತ್ತೊಂದು ಸರ್ಕಾರ ರಚನೆ ಮಾಡೋಕೆ  ರಾಜ್ಯಪಾಲರು ಆಹ್ವಾನ ಕೊಡಬಹುದು, ಕಾದು ನೋಡೋಣ. ಹೀಗಂತ ಮೈತ್ರಿ ಸರಕಾರದ ಸಚಿವರೇ ಹೊಸ ಬಾಂಬ್ ಸ್ಫೋಟ ಮಾಡಿದ್ದಾರೆ.

ಇಷ್ಟು ಮಟ್ಟದಲ್ಲಿ ಶಾಸಕರು ರಾಜೀನಾಮೆ ನೀಡಿದ್ದು ನನಗೆ ಆಶ್ಚರ್ಯ ಆಯ್ತು. ರಾಜಕಾರಣದಲ್ಲಿ ಯಾವ ರೀತಿ ಪರಿಸ್ಥಿತಿ ಬಂದ್ರೂ ನಾವು ಎದುರಿಸಬೇಕಾಗುತ್ತೆ.

ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಮುಂದೆ ಗವರ್ನರ್ ಯಾವ ರೀತಿ ಕ್ರಮ ವಹಿಸ್ತಾರೆ ಕಾದು ನೋಡೋಣ. ಹೀಗಂತ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಹೇಳಿದ್ದಾರೆ.

ಮೈತ್ರಿಯಲ್ಲಿ ಹೊಂದಾಣಿಕೆ ಆಗಿಲ್ಲ, ಕೆಲವು ಹಿರಿಯರಿಗೆ ಅರ್ಹತೆ ಇದ್ರೂ ಮಂತ್ರಿ ಮಾಡಿಲ್ಲ ಅನ್ನೋ ನೋವು ಇರಬಹುದು. ದೋಸ್ತಿಯಲ್ಲಿ ಎಲ್ಲರನ್ನ ಸಮರ್ಪಕವಾಗಿ ಸಮನ್ವಯಕ್ಕೆ ತಗೋಳ್ಳೊಕೆ ಬಹುಶಃ ಆಗ್ಲೇ ಇಲ್ಲ ಅನ್ನೋದು ಅವರ ದೃಷ್ಠಿಕೋನ ಇರಬಹುದು.

ದೋಸ್ತಿ ಸರ್ಕಾರ ಹಲವರಿಗೆ ಬೇಸರ ತಂದಿದೆ. ಅದಕ್ಕೆ ರಾಜೀನಾಮೆ ನೀಡಿರಬಹುದು ಅಂತ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಹಿಂದುಪುರದಲ್ಲಿ ಹಿಂದುಗಳು ಮಾಡಿದ್ರು ಭಾರೀ ಒಳ್ಳೆ ಕೆಲಸ