Select Your Language

Notifications

webdunia
webdunia
webdunia
webdunia

ಠಾಣೆಗಳನ್ನು ಹೆಚ್ಚಿಸಿ ಸರ್ಕಾರ ಆದೇಶ

ಠಾಣೆಗಳನ್ನು ಹೆಚ್ಚಿಸಿ ಸರ್ಕಾರ ಆದೇಶ
bangalore , ಬುಧವಾರ, 28 ಡಿಸೆಂಬರ್ 2022 (16:11 IST)
ರಾಜ್ಯ ಪೊಲೀಸ್ ಇಲಾಖೆಯ ಸಬ್​ ಡಿವಿಷನ್​ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸಂಚಾರ, ಕಾನೂನು ಸುವ್ಯವಸ್ಥೆ ಕಾಪಾಡಲು ಠಾಣೆಗಳ ಸಬ್ ಡಿವಿಷನ್​ಗಳನ್ನು ಹೆಚ್ಚಳ ಮಾಡಲಾಗಿದೆ. ಪೊಲೀಸ್ ಮಹಾ ನಿರ್ದೇಶಕರು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈಗ ಸಬ್​ ಡಿವಿಷನ್​ನಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಪಶ್ಚಿಮ ಸಂಚಾರ ಸಬ್​ ಡಿವಿಷನ್ ಮಾರ್ಪಡಿಸಿ ಆದೇಶ ನೀಡಿದೆ. ಪಶ್ಚಿಮ ಸಂಚಾರ ಉಪವಿಭಾಗದ ಜತೆಗೆ ವಿಜಯನಗರ ಉಪವಿಭಾಗ ಸೇರ್ಪಡೆ ಮಾಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಆಗ್ನೇಯ ಸಬ್​ ಡಿವಿಷನ್​ ಕೂಡ ವಿಂಗಡಣೆ ಮಾಡಲಾಗಿದೆ. ಆಗ್ನೇಯ ಸಬ್​ ಡಿವಿಷನ್​ ಜತೆಗೆ ಆಡುಗೋಡಿ ಸಬ್​ ಡಿವಿಷನ್​ ರಚಿಸಲಾಗಿದೆ. ಹೊಸದಾಗಿ ಹೆಚ್​ಎಸ್​ಆರ್​ ಲೇಔಟ್​ ಸಬ್​ ಡಿವಿಷನ್​ ಸೇರ್ಪಡೆ ಮಾಡಲಾಗಿದೆ. ಉತ್ತರ ವಿಭಾಗದ ಯಶವಂತಪುರ ಸಬ್ ಡಿವಿಷನ್​ ವಿಂಗಡಿಸಿ ಯಶವಂತಪುರ, ಪೀಣ್ಯ ಸಬ್​ ಡಿವಿಷನ್​ಗಳಾಗಿ ಮಾರ್ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಅಶ್ಲೀಲ ಪೋಸ್ಟ್ ಖಂಡಿಸಿದ್ದಕ್ಕೆ ತಂದೆ ಹತ್ಯೆ