Select Your Language

Notifications

webdunia
webdunia
webdunia
webdunia

ಅಂಡಮಾನ್ ನಿಕೋಬಾರ್ ಗೆ ಹೋಗಿ ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ತಿಳಿದುಕೊಂಡು ಬರಲಿ-ಸದಾನಂದಗೌಡ

ಅಂಡಮಾನ್ ನಿಕೋಬಾರ್ ಗೆ ಹೋಗಿ ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ತಿಳಿದುಕೊಂಡು ಬರಲಿ-ಸದಾನಂದಗೌಡ
ಬೆಂಗಳೂರು , ಭಾನುವಾರ, 20 ಅಕ್ಟೋಬರ್ 2019 (11:25 IST)
ಬೆಂಗಳೂರು : ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ  ಗೂಬೆ ಕೂರಿಸುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ಹೇಳಿದ್ದಾರೆ.




ಇಂತಹ ಕುಹಕ,ವಕ್ರ ಮಾತುಗಳನ್ನಾಡುವುದೇ ಅವರ ಕೆಲಸ. ಸಿದ್ದರಾಮಯ್ಯ ಅಂಡಮಾನ್ ನಿಕೋಬಾರ್ ಗೆ ಹೋಗಿ ಬರಲಿ . ಸಿದ್ದರಾಮಯ್ಯ ಅಲ್ಲಿ ಸಾವರ್ಕರ್ ಬಗ್ಗೆ ತಿಳಿದುಕೊಂಡು ಬರಲಿ . ಸಾರ್ವಜನಿಕರಿಂದ ಹಣ ಪಡೆದು ಅವರನ್ನು ಅಲ್ಲಿಗೆ ಕಳಿಸೋಣ. ಶಿವಕುಮಾರ ಶ್ರೀಗಳಿಗೆ ಭಾರತರತ್ನ ಕೊಡಿಸುವುದು ನಮ್ಮ ಆದ್ಯತೆ ಎಂದು ಹೇಳಿದ್ದಾರೆ.


ಯಶವಂತಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಆಕಾಂಕ್ಷಿಗಳ ಬಗ್ಗೆ ತೀರ್ಮಾನ ಮಾಡುವುದು ಹೈಕಮಾಂಡ್ ನಾವು ಇಲ್ಲಿ ಏನು ಹೇಳುವ ಹಾಗಿಲ್ಲ. ನಾವು ಕೇವಲ ಮಾಹಿತಿ ಕಲೆಹಾಕಿ ಕೇಂದ್ರಕ್ಕೆ ಕಳುಹಿಸುವುದು. ಅಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ನಾವು ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಕ್ಷೇತ್ರಕ್ಕೆ ಯಾರೇ ಕೈ ಹಾಕಿದರೂ ಕೈ ಕತ್ತರಿಸುತ್ತೇನೆ- ಸುಧಾಕರ್ ಗೆ ಎಚ್ಚರಿಕೆ ನೀಡಿದ ಕೈ ಶಾಸಕ