Select Your Language

Notifications

webdunia
webdunia
webdunia
webdunia

ಜಾತಿಯ ಸಂಕುಚಿತ ಮನೋಭಾವದಿಂದ ಹೊರಬರಬೇಕು– ಹೆಗಡೆ

ಜಾತಿಯ ಸಂಕುಚಿತ ಮನೋಭಾವದಿಂದ ಹೊರಬರಬೇಕು– ಹೆಗಡೆ
ದಾವಣಗೆರೆ , ಸೋಮವಾರ, 15 ಜನವರಿ 2018 (16:29 IST)
ಜಾತಿ ಎಂಬ ಸಂಕುಚಿತ ಮನೋಭಾವದಿಂದ ಹೊರಬರಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
 
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬ್ರಾಹ್ಮಣರನ್ನು ಬೈಯ್ಯುವುದು ಮಾಮೂಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದ ಮಹಾಪುರುಷರಲ್ಲಿ ಬಹುತೇಕರು ಬ್ರಾಹ್ಮಣರಲ್ಲ. ಶ್ರೀರಾಮಚಂದ್ರ, ಶ್ರೀ ಕೃಷ್ಣ ಹಾಗೂ ವಾಲ್ಮೀಕಿ ಅವರು ಬ್ರಾಹ್ಮಣರೇ ಎಂದು ಪ್ರಶ್ನಿಸಿದ ಅವರು, ಜಾತಿಯನ್ನು ಮೂಲವಾಗಿ ಇಟ್ಟುಕೊಂಡು ಮಾತನಾಡಬಾರದು, ಜಾತಿಗೆ ಮಣೆ ಹಾಕಿದ ಸಮಾಜ ನಮ್ಮದಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ 15ದಿನಗಳಲ್ಲಿ ಪ್ರಕಟ– ಡಿವಿಎಸ್‌