Publish Date: Thu, 13 Sep 2018 (18:59 IST)
Updated Date: Thu, 13 Sep 2018 (19:04 IST)
ದೇಶದಲ್ಲೆಡೆ ಗೌರಿ ಗಣೇಶ್ ಹಬ್ಬದ ಸಂಭ್ರಮ ಮನೆ ಮಾಡಿದ್ದು ಕಲಬುರ್ಗಿಯಲ್ಲಿ ಕೂಡ ಜನ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡುತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಜಿಲ್ಲೆಯಾದ್ಯಂತ ಜನತೆ ವಿಘ್ನ ವಿನಾಯಕನನ್ನ ಕೊಂಡುಕೊಳ್ಳುವ ದೃಶ್ಯ ಸಾಮನ್ಯವಾಗಿತ್ತು.
ಬೆಳಿಗ್ಗೆಯು ಕೂಡ ಜನ ವಿನಾಯಕನನ್ನ ಮನೆಗೆ ತೆಗೆದು ಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಗಣೇಶನಿಗೆ ಇಷ್ಟವಾದ ಗರಿಕಿ, ಪತ್ತರಿ, ಹಣ್ಣು ಹಂಪಲ, ಸೀತಾ, ಪೇರಲ ಹಣ್ಣುಗಳ ಮಾರಾಟ ಕೂಡ ಜೋರಾಗಿತ್ತು.
ಈ ಬಾರಿ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಹಬ್ಬಕ್ಕೆ ಕೊಂಚಮಟ್ಟದ ಹಿನ್ನಡೆಯನ್ನ ಮಾಡಿದ್ರೂ, ಹಬ್ಬದ ಕಳೆ ಮಾತ್ರ ಕಳೆಗುಂದಿರಲಿಲ್ಲ. ಜನ ಭಾಳ ಹುಮ್ಮಸ್ಸಿನಿಂದ ಹಬ್ಬ ಸಡಗರದಲ್ಲಿ ತೊಡಗಿದ್ದು ಕಂಡುಬಂತು.