Select Your Language

Notifications

webdunia
webdunia
webdunia
webdunia

ಸರ್ವೋದಯ ದಿನಾಚರಣೆ ಅಂಗವಾಗಿ ಗಾಂಧೀಜಿ ರವರ ಪ್ರತಿಮೆಗೆ ಮಾಲಾರ್ಪಣೆ

bbmp

geetha

bangalore , ಮಂಗಳವಾರ, 30 ಜನವರಿ 2024 (14:41 IST)
ಬೆಂಗಳೂರು-ಬಿಬಿಎಂಪಿ ವತಿಯಿಂದ ಸರ್ವೋದಯ ದಿನಾಚರಣೆ ಆಚರಣೆ ಮಾಡಲಾಗಿದೆ.ಆಡಳಿತಗಾರ ರಾಕೇಶ್ ಸಿಂಗ್,  ಮುಖ್ಯ ಆಯುಕ್ತರಾದ  ತುಷಾರ್ ಗಿರಿ ನಾಥ್ ಮಹಾತ್ಮ ಗಾಂಧೀಜಿ ರಸ್ತೆಯಲ್ಲಿರುವ  ಗಾಂಧೀಜಿ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಕೆ ಮಾಡಿದ್ದಾರೆ.
 
ಕಾರ್ಯಕ್ರಮದಲ್ಲಿ ಪ್ರತಿಭಾ ಬಾಲಮಂದಿರ ಮಕ್ಕಳಿಂದ ಗೀತ ವಾಚನ ನಡೆದಿದೆ.ದೀಪಿಕಾ ಶ್ರೀಕಾಂತ್ ರವರಿಂದ ವೈಷ್ಣವ ಜನತೋ, ಹಡ್ಸನ್ ಚರ್ಚಿನ ಫಾದರ್ ರೆವೆರೆಂಡ್ ಆಲ್ಫ್ರೆಡ್ ಸುದರ್ಶನ್ ಮತ್ತು ತಂಡದಿಂದ ಬೈಬಲ್ ವಾಚನ,ಗುರುದ್ವಾರದ  ಗುರುಸಿಂಗ್ ಸಭಾ ಮತ್ತು ತಂಡದವರಿಂದ ಗುರು ಗ್ರಂಥ ವಾಚನ ನಡೆಸಲಾಗಿದೆ. ಮೌಲ್ವಿ ಹಫೀಜ್ ಶಾಬೀರ್ ಹುಸೇನ್ ರವರಿಂದ ಖುರಾನಿನ ವಾಚನ ಮಾಡಲಾಗಿದೆ.ಮಾಜಿ ಸಚಿವರಾದ  ರಾಮಚಂದ್ರಗೌಡ, ಮಾಜಿ ಮಹಾಪೌರರಾದ ರಾಮಚಂದ್ರ, ಹುಚ್ಚಪ್ಪ, ಬಿ.ಎಸ್ ಸತ್ಯನಾರಾಯಣ,  ಪದ್ಮಾವತಿ, ವಲಯ ಆಯುಕ್ತರಾದ ಸ್ನೇಹಲ್, ಜಂಟಿ ಆಯುಕ್ತರಾದ ಪಲ್ಲವಿ ಇನ್ನಿತರೆ ಗಣ್ಯರುಗಳು ಉಪಸ್ಥಿತರಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಸಿಬಿ ಮಾದಕ ವಸ್ತು ನಿಗ್ರಹ ದಳದಿಂದ‌ ಭರ್ಜರಿ ಕಾರ್ಯಚರಣೆ