Select Your Language

Notifications

webdunia
webdunia
webdunia
webdunia

ಆಕಸ್ಮಿಕವಾಗಿ ಗುಂಡು ಹಾರಿ ರಾಜ್ಯದ ಬಿಎಸ್ ಎಫ್ ಯೋಧ ಸಾವು

ಆಕಸ್ಮಿಕವಾಗಿ ಗುಂಡು ಹಾರಿ ರಾಜ್ಯದ ಬಿಎಸ್ ಎಫ್ ಯೋಧ ಸಾವು
bengaluru , ಬುಧವಾರ, 21 ಜುಲೈ 2021 (16:53 IST)
ಸರ್ವಿಸ್ ರೈಫಲ್ ನಿಂದ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ಗದಗ ಮೂಲದ ಬಿಎಸ್ ಎಫ್ ಯೋಧ ಮೃತಪಟ್ಟ ಘಟನೆ ಛತ್ತೀಸ್ ಗಢದಲ್ಲಿ ಸಂಭವಿಸಿದೆ.
ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ ಸೈನಿಕ ಲಕ್ಷ್ಮಣ ಗೌರಣ್ಣವರ (35) ಮೃತಪಟ್ಟಿದ್ದಾರೆ.
ಸೋಮವಾರ ಸಂಜೆ ನಕ್ಸಲ್ 
ಗುಂಡಿಗೆ ಲಕ್ಷ್ಮಣ ಗೌರಣ್ಣವರ ಬಲಿಯಾಗಿದ್ದಾರೆ ಎಂಬ ಬಗ್ಗೆ ವದಂತಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಡಳಿತಕ್ಕೆ ಬಿಎಸ್ ಎಫ್ ಅಧಿಕೃತ ಮಾಹಿತಿ ನೀಡಿದೆ.
ಯೋಧನ ಪಾರ್ಥೀವ ಶರೀರ ಹುಟ್ಟೂರಿಗೆ ಆಗಮಿಸುತ್ತಿದ್ದು, ಸಂಜೆ ಹುಟ್ಟೂರಿನಲ್ಲೇ ಅತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸುವುದಾಗಿ ಗದಗ ಜಿಲ್ಲಾಧಿಕಾರಿ ಎಮ್ ಸುಂದರೇಶ್ ಬಾಬು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖತಾರ್ ಏರ್ವೇಸ್ಗೆ ಅತ್ಯುತ್ತಮ ವಿಮಾನಯಾನ ಸಂಸ್ಥೆ ಗರಿ; ಟಾಪ್ 20 ಬೆಸ್ಟ್ ಏರ್ಲೈನ್ಸ್ ಪಟ್ಟಿ ಇಲ್ಲಿದೆ!