Webdunia - Bharat's app for daily news and videos

Install App

ನಂದಿಗಿರಿ ಪ್ರದಕ್ಷಿಣೆಯಿಂದ ಕೈಲಾಸ ದರ್ಶನದಷ್ಟೇ ಪುಣ್ಯ ಕಟ್ಟಿಕೊಳ್ಳಿ

Webdunia
ಸೋಮವಾರ, 29 ಜುಲೈ 2019 (16:30 IST)
ಕೈಲಾಸ ಪರ್ವತವನ್ನ ಏರಿ ಪ್ರದಕ್ಷಿಣೆ ಹಾಕೋಕೆ ಆಗದವರು ನಂದಿಯ ಪಂಚಗಿರಿಯ ಸಾಲನ್ನು  ಪ್ರದಕ್ಷಿಣೆ ಹಾಕಿದರೆ ಮುಕ್ತಿ ದೊರೆಯುತ್ತೆ ಅನ್ನೋ ನಂಬಿಕೆ ಅಚಲವಾಗಿದೆ.

ಆಷಾಢ  ಮಾಸದ ಕಡೆ ಸೋಮವಾರದಂದು ಪ್ರತಿ ವರ್ಷ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಗೆ ಪ್ರದಕ್ಷಿಣೆ  ಹಾಕೋಕೆ ಸಾವಿರಾರು ಭಕ್ತರು ಇಲ್ಲಿ ಜಮಾಯಿಸ್ತಾರೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಸೇರಿದಂತೆ ನೆರೆಯ ಆಂಧ್ರದಿಂದ ಬರೋ ಭಕ್ತರು ಇವತ್ತು ಐದು ಬೆಟ್ಟಗಳ ಸಾಲನ್ನು ಹೊಂದಿರುವ ನಂದಿಗಿರಿಗೆ ಪ್ರದಕ್ಷಿಣೆ ಹಾಕಿದ್ರು.

ಆ ಮೂಲಕ  ಮೂಲಕ ತಮ್ಮ ಭಕ್ತಿ ಭಾವವನ್ನು ಹರಿಸಿದ್ರು. ಕೈಲಾಸ ಪರ್ವತದಷ್ಟೇ ಪ್ರಖ್ಯಾತಿ ಹೊಂದಿರುವ ನಂದಿಯ ಭೋಗ  ನಂದೀಶ್ವರ ದೇವಾಲಯದಿಂದ ಆರಂಭವಾಗುವ ಪ್ರದಕ್ಷಿಣೆ ಸುಮಾರು 16 ಕಿ.ಮೀ ವ್ಯಾಪ್ತಿಯಲ್ಲಿ ಬೆಟ್ಟಕ್ಕೊಂದು  ಸುತ್ತು ಬರುತ್ತದೆ.

ನಂದಿ ಗ್ರಾಮದಲ್ಲಿ ಭೋಗ ನಂದೀಶ್ವರ, ಬೆಟ್ಟದ ಮೇಲೆ ಯೋಗ ನಂದೀಶ್ವರ ಹೊಂದಿದ್ದು,  ಹಾದಿ ಮಧ್ಯೆ ಸಿಗುವ ಕಣಿವೆ ಬಸವೇಶ್ವರನಿಗೆ ಪೂಜೆ ಸಲ್ಲಿಸುತ್ತಾರೆ. ನಂದಿಗಿರಿ ಪ್ರದಕ್ಷಿಣೆಗೆ ಮಕ್ಕಳಿಂದ, ಮುದುಕರವರೆಗೂ ಸಾವಿರಾರು ಭಕ್ತಾದಿಗಳು ಆಗಮಿಸಿ ಹಾಡು, ಭಜನೆ, ನೃತ್ಯದ ಮೂಲಕ  ಪ್ರದಕ್ಷಿಣೆ ಸಾಗುತ್ತದೆ. ಭಕ್ತಾದಿಗಳು ಅಲ್ಲಲ್ಲಿ ಪ್ರಸಾದದ ವ್ಯವಸ್ಥೆಯನ್ನೂ ಮಾಡಿದ್ದರು. ಸುಮಾರು 81 ವರ್ಷದ ಇತಿಹಾಸ ಈ ಪ್ರದಕ್ಷಿಣೆಗಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments