Select Your Language

Notifications

webdunia
webdunia
webdunia
webdunia

ಗಡಿ ವಿಚಾರಣೆಯಿಂದ ನ್ಯಾ. ಬಿವಿ ನಾಗರತ್ನ ಹಿಂದಕ್ಕೆ

ಗಡಿ ವಿಚಾರಣೆಯಿಂದ ನ್ಯಾ. ಬಿವಿ ನಾಗರತ್ನ ಹಿಂದಕ್ಕೆ
navadehali , ಶುಕ್ರವಾರ, 10 ಫೆಬ್ರವರಿ 2023 (16:55 IST)
ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವಿನ ಗಡಿ ವಿವಾದದ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿವಿ ನಾಗರತ್ನ ಅವರು ಬುಧವಾರ ಹಿಂದೆ ಸರಿದಿದ್ದಾರೆ. ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವಿನ ಗಡಿ ವಿವಾದದ ವಿಚಾರಣೆಯ ಮೊಕದ್ದಮೆಯನ್ನು ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್, ಹೃಷಿಕೇಶ್ ರಾಯ್ ಮತ್ತು ಬಿವಿ ನಾಗರತ್ನ ಅವರ ಪೀಠದ ಮುಂದೆ ಪಟ್ಟಿ ಮಾಡಲಾಗಿದ್ದು, ರಾಜ್ಯ ಮರುಸಂಘಟನೆ ಕಾಯಿದೆ, 1956 ರ ಸೆಕ್ಷನ್ 3,7 ಮತ್ತು 8 ರ ಕೆಲವು ಭಾಗಗಳನ್ನು ಬಹಿರಂಗಪಡಿಸಲು ಕೋರಿ 2004 ರಲ್ಲಿ ಮಹಾರಾಷ್ಟ್ರ ಸರ್ಕಾರವು ಮೊಕದ್ದಮೆ ಹೂಡಿತ್ತು. ಈ ಕಾಯಿದೆಯು ಭಾಷಾವಾರು ರೀತಿಯಲ್ಲಿ ರಾಜ್ಯಗಳನ್ನು ಮರುಸಂಘಟಿಸಲು ಸಂಬಂಧಿಸಿದಾಗಿದ್ದು, ಕರ್ನಾಟಕದ ಐದು ಜಿಲ್ಲೆಗಳ 865 ಗ್ರಾಮಗಳು ಮತ್ತು ಸ್ಥಳಗಳು ಮರಾಠಿ ಮಾತನಾಡುವ ಜನರನ್ನು ಒಳಗೊಂಡಿವೆ.. ಹೀಗಾಗಿ ಬೆಳಗಾವಿ ಕರ್ನಾಟಕ ರಾಜ್ಯದ ಭಾಗವಾಗಿರಬಾರದು, ಬದಲಿಗೆ ಮಹಾರಾಷ್ಟ್ರದ ಭಾಗವಾಗಬೇಕು ಎಂದು ಮಹಾರಾಷ್ಟ್ರ ಸರ್ಕಾರವು  ತನ್ನ ಅರ್ಜಿಯಲ್ಲಿ ವಾದಿಸಿದೆ. ಎರಡು ರಾಜ್ಯಗಳ ರಾಜ್ಯ ಸರ್ಕಾರಗಳ ನಡುವಿನ ವಿವಾದವನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಗೆ ಅಧಿಕಾರ ನೀಡುವ ಸಂವಿಧಾನದ 131 ನೇ ವಿಧಿಯನ್ನು ಉಲ್ಲೇಖಿಸಿದ ಮಹಾರಾಷ್ಟ್ರ ಸರ್ಕಾರವು ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಭಾಗಿಯಾಗಿರುವ ವಿವಾದಗಳ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ಗೆ ನ್ಯಾಯವ್ಯಾಪ್ತಿ ಇದೆ ಎಂದು ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಳಿಗಿರಿರಂಗನ ಹುಂಡಿಯಲ್ಲಿ 10 ಲಕ್ಷ ರೂ. ಸಂಗ್ರಹ