Select Your Language

Notifications

webdunia
webdunia
webdunia
webdunia

ಕೈ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡಿಲ್ಲ ಎಂದ ಮಾಜಿ ಸಿಎಂ!

ಕೈ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡಿಲ್ಲ ಎಂದ ಮಾಜಿ ಸಿಎಂ!
ಹುಬ್ಬಳ್ಳಿ , ಗುರುವಾರ, 17 ಜನವರಿ 2019 (17:57 IST)
ಸಚಿವ ಸ್ಥಾನದ ಮೇಲೆ ಆಸೆ ಕಣ್ಣು ಇಟ್ಟುಕೊಂಡಿರುವ ಕೈ ಪಾಳೆಯದ ಅತೃಪ್ತ ಶಾಸಕರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿಯಾಗಿ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದವರು ಯಾರು ಬಿಜೆಪಿ ಗೆ ಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಯಾರಿಗೂ ಮಂತ್ರಿಗಿರಿ ನೀಡುವ ಭರವಸೆ ನೀಡಿಲ್ಲ ಎಂದಿರುವ ಅವರು, ಆಪರೇಷನ್ ಕಮಲ  ಎಂಬ ಪದವನ್ನು ಪ್ರಾರಂಭಿಸಿದ್ದೇ ಬಿ.ಎಸ್. ಯಡಿಯೂರಪ್ಪನವರು. ಪ್ರಜಾಪ್ರಭುತ್ವದಲ್ಲಿ ಇದೊಂದು ರೋಗ ಇದ್ದ ಹಾಗೆ ಎಂದು ಜರಿದ ಅವರು, ಬಿಜೆಪಿಯವರಿಗೆ ಅವರ ಶಾಸಕರ ಮೇಲೆಯೇ ನಂಬಿಕೆ ಇಲ್ಲ. ಇದು ಒಂದು ಅಸಹ್ಯ ರಾಜಕಾರಣ ಎಂದು ಕುಟುಕಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸದ್ಯಕ್ಕೆ ರಾಜ್ಯದ ಮಂತ್ರಿ ಮಂಡಲದಲ್ಲಿ ಬದಲಾವಣೆ ಇಲ್ಲ ಎಂದೂ ಹೇಳುವ ಮೂಲಕ ಅತೃಪ್ತ ಶಾಸಕರ ಆಸೆಗೆ ತಣ್ಣೀರು ಎರಚಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶೋಭಕ್ಕ, ಬಿಎಸ್ವೈ ಕಾಳೆಲೆದ ಸಚಿವ ರೇವಣ್ಣ!