Webdunia - Bharat's app for daily news and videos

Install App

ಬೈ ಎಲೆಕ್ಷನ್ ನಲ್ಲಿ ಅನರ್ಹ ಶಾಸಕರ ಬಾಲ ಕಟ್ ಮಾಡುವೆ ಎಂದ ಮಾಜಿ ಸಿಎಂ

Webdunia
ಗುರುವಾರ, 14 ನವೆಂಬರ್ 2019 (20:42 IST)
ಅನರ್ಹ ಶಾಸಕರ ವಿರುದ್ಧ ಮಾಜಿ ಸಿಎಂ ಫುಲ್ ಗರಂ ಆಗಿದ್ದಾರೆ.

ಮೈತ್ರಿ ಸರಕಾರವನ್ನು ಕೆಡವಿರೋ ಅನರ್ಹ ಶಾಸಕರ ಪುರಾಣವನ್ನು ಉಪ ಚುನಾವಣೆಯಲ್ಲಿ ಬಿಚ್ಚಿಡುವೆ ಅಂತ ಮಾಜಿ ಸಿಎಂ ಎಚ್ಚರಿಕೆ ನೀಡಿದ್ದಾರೆ.

2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ ಕೆ.ಆರ್.ಪೇಟೆಗೆ ಇಂಜಿನಿಯರಿಂಗ್ ಕಾಲೇಜು ನೀಡಿ ಕ್ಷೇತ್ರಕ್ಕೆ 500 ಕೋಟಿ ಅನುದಾನವನ್ನು ನೀಡಿದ್ದೆ ಎಂದಿರೋ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆ.ಆರ್.ಪೇಟೆಗೆ ನಾರಾಯಣಗೌಡನನ್ನು ಕೇಳಿಕೊಂಡು ಅನುದಾನ ಬಿಡುಗಡೆ ಮಾಡಬೇಕಾ? ಸರ್ಕಾರದ ದಾಖಲೆಯನ್ನು ಪರಿಶೀಲಿಸಲಿ, ಅವೇ ಉತ್ತರ ನೀಡ್ತಾವೆ, ನಾನು ಮಂಜೂರು ಮಾಡಿಕೊಟ್ಟಿರುವ ಯೋಜನೆಗಳನ್ನು ಯಡಿಯೂರಪ್ಪ ಮಾಡಿಕೊಟ್ಟರು. ಪುಣ್ಯಾತ್ಮ ಯಡಿಯೂರಪ್ಪ ಇಂದ್ರ, ಚಂದ್ರ ಅಂತೆಲ್ಲಾ ಚಮಚಾಗಿರಿ ಮಾಡ್ತಿರೋ ನಾರಾಯಣಗೌಡ ಹೊಗಳ್ತಿದ್ದಾರೆ ಅಂತ ಕಿಚಾಯಿಸಿದ್ರು.

ನನ್ನ ಕುಟುಂಬವನ್ನು ಎದುರಾಕಿಕೊಂಡು ಪಕ್ಷದ ಟಿಕೆಟ್ ನೀಡಿ ತಪ್ಪು ಮಾಡಿದೆ. ಕುಟುಂಬಕ್ಕೆ ನೋವು ನೀಡಿದೆ. ಸುಳ್ಳು ಆರೋಪಗಳಿಗೆ ಉತ್ತರ ನೀಡಬೇಕಾ? ಸದ್ಯದಲ್ಲಿಯೇ ಮತ್ತೆ ಕೆ.ಆರ್.ಪೇಟೆಗೆ ಬರ್ತೀನಿ. ಈತನ ಪುರಾಣವನ್ನು ಬಿಚ್ಚಿಡ್ತೀನಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments