Select Your Language

Notifications

webdunia
webdunia
webdunia
webdunia

ಮುಧೋಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಭೀತಿ

ಮುಧೋಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಭೀತಿ
ಬಾಗಲಕೋಟೆ , ಮಂಗಳವಾರ, 16 ಆಗಸ್ಟ್ 2022 (19:46 IST)
ಬಾಗಲಕೋಟೆಯ ಮುಧೋಳ ತಾಲೂಕಿನ ಕೆಲ ಗ್ರಾಮಗಳು ಪ್ರವಾಹದ ಭೀತಿಯನ್ನು ಎದುರಿಸುತ್ತಿದೆ. ಸೋರಗಾಂವ-ಜಾಲಿಬೇಲಿ ಸೇತುವೆ, ಮುಧೋಳ-ಯಾದವಾಡ ಸೇತುವೆ, ಮಾಚಕನೂರು ಸೇತುವೆ ಮುಳುಗಡೆಯಾಗಿದೆ. ನದಿ ಪಾತ್ರದ ಹೊಲದಲ್ಲಿನ ರೈತ ಮನೆಗಳು ಜಲಾವೃತವಾಗಿದೆ. ಮನೆ ತೊರೆದು ಸುರಕ್ಷಿತ ಸ್ಥಳದತ್ತ ರೈತರು ಮುಖ ಮಾಡಿದ್ದಾರೆ. ಜಾಲಿಬೇರಿ- ಸೋರಗಾಂವ ಹೊಲದಲ್ಲಿ ವಾಸವಿದ್ದ ರೈತರ ಮನೆಗಳು ಜಲಾವೃತವಾಗಿದ್ದು, ಹೆಸರು, ಸೋಯಾಬಿನ್​​​​, ಮೆಕ್ಕೆಜೋಳ, ಕಬ್ಬು ಬೆಳೆಗಳು ಜಲಾವೃತವಾಗಿದೆ. ನದಿ ತೀರದ ರೈತ ಕುಟುಂಬಗಳಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದವರ ರಕ್ಷಣೆ