Select Your Language

Notifications

webdunia
webdunia
webdunia
webdunia

Firing Case: ನ್ಯಾಯ ಸಿಗದಿದ್ದಲ್ಲಿ ಸುಮ್ಮನೇ ಕೂರವವರೇ ಅಲ್ಲ, ರಿಕ್ಕಿ ರೈ

ರಿಕ್ಕಿ ರೈ

Sampriya

ರಾಮನಗರ , ಮಂಗಳವಾರ, 3 ಜೂನ್ 2025 (20:10 IST)
Photo Credit X
ರಾಮನಗರ: ನನ್ನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ಸಂಬಂಧ ನನಗೆ ನ್ಯಾಯ ಸಿಗಲೇ ಬೇಕು. ಇಲ್ಲವಾದಲ್ಲಿ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಭೂಗತ ಲೋಕದ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹೇಳಿದರು. 

ಪ್ರಕರಣ ಸಂಬಂಧ ಪೊಲೀಸ್ ವಿಚಾರಣೆಗೆ ಹಾಜರಾದ ರಿಕ್ಕಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. 

ಗುಂಡಿನ ದಾಳಿಯಿಂದ ನನ್ನ ಮೂಗು ಕಟ್ ಆಗಿದ್ದು, ಕೈಗಳಿಗೂ ಗುಂಡು ತಗುಲಿತು. ದೇವರ ದಯೆಯಿಂದ ಬಚಾವ್ ಆಗಿದ್ದೇನೆ. 

ನಾಣು ಸಹ ಬಲಿಷ್ಠವಾಗಿದ್ದೇನೆ. ಘಟನೆ ಹಿಂದಿರುವ ಶಂಕಿತರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಯುತ್ತಿರುವುದರಿಂದ ಹೆಚ್ಚೇನೂ ಹೇಳಲ್ಲ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮಾಜಿ ಅಂಗರಕ್ಷಕ ಮೊನ್ನಪ್ಪ ವಿಠಲ ಬಂಧನ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ರಿಕ್ಕಿ, ತನಿಖೆ ನಡೆಯುತ್ತಿದ್ದು, ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು. 


Share this Story:

Follow Webdunia kannada

ಮುಂದಿನ ಸುದ್ದಿ

ಗೌರವ ಡಾಕ್ಟರೇಟ್‌ ನಿರಾಕರಿಸಿದ ಸಚಿವ ಸತೀಶ್ ಜಾರಕಿಹೊಳಿ, ಕಾರಣ ಬಿಚ್ಚಿಟ್ಟಿದ್ದು ಹೀಗೇ