Select Your Language

Notifications

webdunia
webdunia
webdunia
webdunia

ಕಬ್ಬಿಗೆ ಬಿದ್ದ ಬೆಂಕಿ; ಬೆಳೆಗಾರ ಕಂಗಾಲು

ಕಬ್ಬಿಗೆ ಬಿದ್ದ ಬೆಂಕಿ; ಬೆಳೆಗಾರ ಕಂಗಾಲು
ವಿಜಯಪುರ , ಗುರುವಾರ, 11 ಏಪ್ರಿಲ್ 2019 (18:00 IST)
ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ಆ ಬೆಳೆಗಾರನ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ.

ಎರಡು ಎಕರೆ ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಬೆಲೆಯ ಕಬ್ಬು ಸುಟ್ಟು ಭಸ್ಮವಾಗಿದೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹೊರ ವಲಯದ ಸೊಡ್ಡಿ ರಸ್ತೆಯಲ್ಲಿರುವ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ.

ಎರಡು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಕರಕಲಾಗಿದೆ. ಶ್ರೀಕಾಂತ ಭರ್ಮಪ್ಪ ಮುತ್ತಿನ ಅವರಿಗೆ ಸೇರಿದ ಕಬ್ಬಿನ ಗದ್ದೆ ಇದಾಗಿದೆ. ಘಟನೆಯಲ್ಲಿ ರೈತನಿಗೆ ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ಚಡಚಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್ ಗೆ ಅನುಭವ, ಅರ್ಹತೆ ಇಲ್ಲ ಎಂದ ನಟ