Select Your Language

Notifications

webdunia
webdunia
webdunia
webdunia

ರಾತ್ರೋರಾತ್ರಿ 7 ಬೈಕ್ ಸುಟ್ಟಿದ್ದು ಹೇಗೆ?

ರಾತ್ರೋರಾತ್ರಿ 7 ಬೈಕ್ ಸುಟ್ಟಿದ್ದು ಹೇಗೆ?
ಕಾರವಾರ , ಬುಧವಾರ, 10 ಏಪ್ರಿಲ್ 2019 (17:03 IST)
ತಡರಾತ್ರಿ ಸಂಭವಿಸಿದ ಬೆಂಕಿ ಅವಘಡಕ್ಕೆ ಬೈಕ್ ಮಾಲೀಕರು ನಲುಗಿದ್ದರೆ, ಸೈಕಲ್ ಸವಾರರು ಆತಂಕಗೊಂಡಿದ್ದಾರೆ.

ಅಗ್ನಿ ಅವಘಡ ಸಂಭವಿಸಿ ದ್ವಿಚಕ್ರ ವಾಹನಗಳು ಸುಟ್ಟು ಕರಕಲಾದ ಘಟನೆ ತಡರಾತ್ರಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹರಿದೇವನಗಲ್ಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಒಟ್ಟು 7 ಬೈಕ್, 3 ಸೈಕಲ್ ಬೆಂಕಿಗೆ ಆಹುತಿಯಾಗಿವೆ.

ಬೆಂಕಿಗಾಹುತಿಯಾದ ಬೈಕ್ ಗಳು ರಸ್ತೆ ಪಕ್ಕದ ಲೈಟ್ ಕಂಬದ ಬಳಿ ನಿಲ್ಲಿಸಿಡಲಾಗಿತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ ವ್ಯಾಕ್ತವಾಗಿದ್ರೆ, ಇನ್ನು ಕೆಲವರು ಇದು ‌ಕಿಡಿಗೇಡಿಗಳ ಕುಕೃತ್ಯ ಎನ್ನುತ್ತಿದ್ದಾರೆ.

ಈ ಬಗ್ಗೆ ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಎನಿ ಟೈಮ್, ಎನಿ ವೇರ್ ರೆಡಿ ಅಂತೆ!