Select Your Language

Notifications

webdunia
webdunia
webdunia
webdunia

ಕೊನೆಗೂ ದೀಪಕ್ ಹತ್ಯೆ ಬಗ್ಗೆ ಪ್ರಕಾಶ್ ರೈ ಪ್ರತಿಕ್ರಿಯೆ

ಕೊನೆಗೂ ದೀಪಕ್ ಹತ್ಯೆ ಬಗ್ಗೆ ಪ್ರಕಾಶ್ ರೈ ಪ್ರತಿಕ್ರಿಯೆ
ಬೆಂಗಳೂರು , ಶುಕ್ರವಾರ, 5 ಜನವರಿ 2018 (10:21 IST)
ಬೆಂಗಳೂರು: ಆಗಾಗ ಬಲಪಂಥೀಯರ ವಿರುದ್ಧ ಕಿಡಿ ಕಾರುವ ಪ್ರಕಾಶ್ ರೈ ಇದೀಗ ಬಿಜೆಪಿ ಕಾರ್ಯಕರ್ತ ದೀಪಕ್ ಹತ್ಯೆ ಬಗ್ಗೆ ತುಟಿ ಪಿಟಕ್ ಎಂದಿಲ್ಲ ಎಂಬ ಟೀಕೆಗಳಿಗೆ ತೆರೆ ಎಳೆದಿದ್ದಾರೆ.
 

ಪ್ರಕಾಶ್ ರೈ ಈ ಬಗ್ಗೆ ಪ್ರತಿಕ್ರಿಯಿಸಿದ್ದು ‘ಕೊಲೆಯಾದವರು ಯಾವುದೇ ಪಕ್ಷಕ್ಕೆ ಸೇರಿರಲಿ. ಅದು ರಾಕ್ಷಸ ಕೃತ್ಯ. ಕೊಲೆಗಾರರು ಯಾವುದೇ ಸಂಘಟನೆಗೆ ಸೇರಿದವರಿರಲಿ ಅವರು ರಾಕ್ಷಸರೇ. ಇದೊಂದು ಹೀನ ಕೃತ್ಯ’ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಗೌರಿ ಲಂಕೇಶ್ ಹತ್ಯೆಯಾದಾಗ, ದಲಿತ ಯುವತಿ ದಾನಮ್ಮ ಹತ್ಯೆಯಾದಾಗ ಬಲಪಂಥೀಯರ ವಿರುದ್ಧ ಕಿಡಿ ಕಾರಿದ್ದ ಪ್ರಕಾಶ್ ರೈ ದೀಪಕ್ ಹತ್ಯೆಯಾದಾಗ ಯಾಕೆ ಸುಮ್ಮನಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳು ಬಂದಿದ್ದವು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂತಿಮ ದರ್ಶನಕ್ಕೆ ಬರದ ಶಾಸಕರ ಪರಿಹಾರ ಹಣವೂ ಬೇಡ ಎಂದ ದೀಪಕ್ ಕುಟುಂಬ