Webdunia - Bharat's app for daily news and videos

Install App

ಸಿಎಂ ಎಚ್ ಡಿಕೆ, ದೇವೇಗೌಡ ಸಂಧಾನ ಸಕ್ಸಸ್: ಕಚೇರಿಗೆ ಪ್ರವೇಶಿಸಲು ಒಪ್ಪಿಕೊಂಡ ಜಿಟಿಡಿ

Webdunia
ಶುಕ್ರವಾರ, 22 ಜೂನ್ 2018 (09:31 IST)
ಬೆಂಗಳೂರು: ಉನ್ನತ ಶಿಕ್ಷಣ ಖಾತೆ ಬೇಡವೆಂದು ಪಟ್ಟು ಹಿಡಿದು ಕೂತಿದ್ದ ಜಿಟಿ ದೇವೇಗೌಡರ ಮನ ಒಲಿಸಲು ಕೊನೆಗೂ ಸಿಎಂ ಎಚ್ ಡಿಕೆ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರು ಯಶಸ್ವಿಯಾಗಿದ್ದಾರೆ.

ನಿನ್ನೆ ಇಬ್ಬರೂ ವರಿಷ್ಠರು ಜಿಟಿಡಿ ಜತೆ ಮಾತುಕತೆ ನಡೆಸಿ ಅಧಿಕಾರ ಸ್ವೀಕರಿಸುವಂತೆ ಮನ ಒಲಿಸಿದರು. ಕಡಿಮೆ ಓದಿರುವ ತನಗೆ ಉನ್ನತ ಶಿಕ್ಷಣ ಇಲಾಖೆಯಂತಹ ಸಚಿವ ಸ್ಥಾನ ಬೇಡ. ಜನರಿಗೆ ಹತ್ತಿರವಾಗಿರುವಂತಹ ಬೇರೆ ಖಾತೆ ಕೊಡಿ ಎಂದು ಜಿಟಿಡಿ ಪಟ್ಟು ಹಿಡಿದಿದ್ದರು.

ಇದೇ ಕಾರಣಕ್ಕೆ ಅವರು ಇದುವರೆಗೆ ತಮ್ಮ ಕಚೇರಿಗೂ ಬಂದಿರಲಿಲ್ಲ, ಅಧಿಕಾರವನ್ನೂ ಸ್ವೀಕರಿಸಿರಲಿಲ್ಲ. ಕೊನೆಗೂ ಇದೀಗ ವರಿಷ್ಠರ ಸಂಧಾನದ ಬಳಿಕ ಇಂದು ವಿಧಾನಸೌಧದಲ್ಲಿರುವ ತಮ್ಮ ಕಚೇರಿ ಪ್ರವೇಶಿಸಲು ಮನಸ್ಸು ಮಾಡಿದ್ದಾರೆ. ಇಂದು ಪೂಜೆ ನೆರವೇರಿಸಿದ ಬಳಿಕ ಜಿಟಿ ದೇವೇಗೌಡ ಅಧಿಕೃತವಾಗಿ ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments