Webdunia - Bharat's app for daily news and videos

Install App

ಅರಣ್ಯ ಒತ್ತುವರಿ ತೆರವು ಭೀತಿ, ಕುಟುಂಬಗಳು ಅತಂತ್ರ

Webdunia
ಭಾನುವಾರ, 15 ಮೇ 2022 (16:10 IST)
ಚಿಕ್ಕಮಗಳೂರು :  ಕಾಫಿನಾಡು ಚಿಕ್ಕಮಗಳೂರಿನ ಭದ್ರ ಹುಲಿ ಸಂರಕ್ಷಿತಾರಣ್ಯಕ್ಕೆ ಹೊಂದಿಕೊಂಡಂತೆ ಕೊಂಚ ದೂರದಲ್ಲಿರೋ ಮಸಗಲಿ ಮೀಸಲು ಅರಣ್ಯ ಪ್ರದೇಶ. ಆ ಮೀಸಲು ಅರಣ್ಯ ಪ್ರದೇಶದ ಸುತ್ತಮುತ್ತಲೂ ಹಲವು ದಶಕದಿಂದ ಸುಮಾರು 220ಕ್ಕೂ ಹೆಚ್ಚು ಕುಟುಂಬಗಳಿವೆ. 
 
ಸುಪ್ರಿಂ ಕೋರ್ಟ್ ಈಗಾಗಲೇ ಮೀಸಲು ಅರಣ್ಯದಲ್ಲಿ ಇರುವ ಜನವಸತಿ ಪ್ರದೇಶವನ್ನು ತೆರವು ಮಾಡುವಂತೆ ಅದೇಶ ಹೊರಡಿಸಿದೆ. ಅಧಿಕಾರಿಗಳಂತೂ ಪುಲ್ ರೆಡಿಯಾಗಿಯೇ ನಿಂತಿದ್ದಾರೆ. 144 ಸೆಕ್ಷನ್ ಹಾಕಿ ತೆರೆವು ಕಾರ್ಯಚರಣೆಯ ಸಿದ್ದತೆಯನ್ನು ಮಾಡಿದ್ದರೂ, ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮ ತೆರವು ಕಾರ್ಯಚರಣೆಗ ತಾತ್ಕಲಿಕವಾಗಿ ಬ್ರೇಕ್ ಬಿದ್ದಿದೆ. ಇದರ ನಡುವೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತೊಂದು ಪ್ರಸ್ತಾವನೆ ಇಟ್ಟಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. 
 
ಮಸಗಲಿ ಮೀಸಲು ಅರಣ್ಯದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಪರಿಹಾರ ನೀಡಲು ಇಲಾಖೆ ಮುಂದಾಗಿದೆ. ಆದ್ರೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಈ ಗ್ರಾಮದಲ್ಲಿ ರೈತರು  ಒಂದು ಎಕರೆ, ಎರಡು ಎಕರೆಯಲ್ಲಿ ಕೃಷಿ ಮಾಡ್ಕೊಂಡಿದ್ರು. ಇದು ಅರಣ್ಯದ ವ್ಯಾಪ್ತಿಗೆ ಬರಲಿದೆ. ಇದಕ್ಕೆ ಮೊದಲು ಪರಿಹಾರ ಕೊಡ್ತೀವಿ ಅಂತಾ ಹೇಳಿದ ಅಧಿಕಾರಿಗಳು ಇದೀಗ ಯಾವುದೇ ಪರಿಹಾರ ನೀಡ್ತಿಲ್ಲ ಅನ್ನೋದು ಸ್ಥಳೀಯರ ಆರೋಪ.
 
ಇನ್ನೂ ಈ ತೆರವು ವಿವಾದವಂತೂ ಇಂದು ನಿನ್ನೆಯದಲ್ಲ. ಒಂದು ದಶಕದಿಂದ ನಡೆಯುತ್ತಲೇ ಇದೆ. ಅದ್ರೆ ಈಗ ಸುಪ್ರಿಂಕೋರ್ಟ್  ತೀರ್ಪಿನಂತೆ ತೆರವು ಮಾಡಲೇಬೇಕು ಇಲ್ಲಾಂದ್ರೆ ಕೋರ್ಟ್  ಆದೇಶ ಉಲ್ಲಂಘನೆಯಾಗುತ್ತೇ ಅನ್ನೋದು ಅಧಿಕಾರಿಗಳಿಗೆ ಗೊತ್ತಾಗ್ತಾ ಇದ್ದಂತೆ ಆಲಾರ್ಟ್ ಅಗಿ ಕಾರ್ಯಚರಣೆ ನಡೆಸೋಕೆ ಮುಂದಾಗಿದ್ದರು.
 
ಅದ್ರೆ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಕೊಂಚ ದಿನ ಮುಂದೂಡಿದ್ದಾರೆ.ಆದರೂ
ಸಮಸ್ಯೆಯನ್ನು ಬಗೆಹರಿಸೋಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಯ್ತು. ಪರ್ಯಾಯ ಭೂಮಿಯನ್ನಾದ್ರೂ ಅಥವಾ ಪರಿಹಾರವನ್ನಾದ್ರೂ ನೀಡೋಕೆ ಅಗುತ್ತಾ ಅಂತಾ ಸರ್ಕಾರ ಮುಂದೇ ಮನವಿ ಮಾಡೋಕೆ ಮುಂದಾಗಿದ್ಧಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ

Indore: ರಾಜ ರಘುವಂಶಿ ಜೊತೆ ಇನ್ನೊಬ್ಬ ಮಹಿಳೆಯ ಹತ್ಯೆಗೆ ಸೋನಂ ಆಂಡ್ ಗ್ಯಾಂಗ್ ಸ್ಕೆಚ್ ಹಾಕಿದ್ದೇಕೆ

Air India Plane crash: ಜೀವ ಉಳಿಸಿಕೊಳ್ಳಲು ಹಾಸ್ಟೆಲ್ ಕಟ್ಟಡದಿಂದ ಹಾರಿದ ವಿದ್ಯಾರ್ಥಿಗಳು video

Air India Plane crash: ವಿಮಾನ ದುರಂತದಲ್ಲಿ ಮನುಷ್ಯರೇ ಭಸ್ಮವಾದರೂ ಇದೊಂದು ವಸ್ತು ಹಾಗೆಯೇ ಇತ್ತು video

ಮುಂದಿನ ಸುದ್ದಿ
Show comments