Publish Date: Mon, 06 Jun 2022 (18:56 IST)
Updated Date: Mon, 06 Jun 2022 (18:57 IST)
ಪ್ರತಿನಿತ್ಯ ಹಣ ಕೊಡು ಎಂದು ಪೀಡಿಸುತ್ತಿದ್ದ ಮಗನ ಕಾಟ ತಾಳಲಾರದೇ ತಂದೆಯೇ ಕೊಂದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರ್ ಟಿ ನಗರ ಚಾಮುಂಡಿ ನಗರದ ನಿವಾಸಿ ಸುಲೇಮಾನ್ (18) ಹತ್ಯೆಯಾಗಿದ್ದು, ತಂದೆ ಮೊಹಮದ್ ಶಂಶೀರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಿತ್ಯ ಹಣ ಕೊಡು ಎಂದು ಪೀಡಿಸುತ್ತಿದ್ದ ಮಗನ ಇಂದು ಮತ್ತೆ ಹಣಕ್ಕೆ ಗಲಾಟೆ ಮಾಡಿದ್ದರಿಂದ ಸಿಟ್ಟಿಗೆದ್ದ ತಂದೆ ಶಂಶೀರ್ ರಾಡ್ ನಿಂದ ತಲೆಗೆ ಹೊಡೆದಿದ್ದರಿಂದ ಮೃತಪಟ್ಟಿದ್ದಾನೆ.
ಆರ್ ಟಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶಂಶೀರ್ ನನ್ನು ಬಂಧಿಸಿದ್ದಾರೆ.