Webdunia - Bharat's app for daily news and videos

Install App

ರಿಯಲ್ ದಿಗ್ಗಜರು ಸಿನಿಮಾ ಕಥೆ.. ರೈತರ ತಾಕತ್ತು

Webdunia
ಸೋಮವಾರ, 24 ಜನವರಿ 2022 (16:46 IST)
ಜೇಬಲ್ಲಿ 10 ರೂ. ಇಲ್ಲ. ಆದರೂ 10 ಲಕ್ಷ ರೂ. ಕಾರು ಕೇಳ್ತಿಯ? ಹೊರಗೆ ಹೋಗು ಎಂದು ಅಪಮಾನಿಸಿದ ಸೇಲ್ಸ್ ಮನ್ ಮುಖಕ್ಕೆ 10 ನಿಮಿಷದಲ್ಲೇ 10 ಲಕ್ಷ ರೂ. ತಂದು ಮುಖಕ್ಕೆ ಬಿಸಾಡಿದ ಘಟನೆ ತುಮಕೂರಿನಲ್ಲಿ ನಡೆದಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುಮಕೂರಿನ ಮಹೀಂದ್ರ ಶೋರೂಂಗೆ ಭೇಟಿ ನೀಡಿದ್ದ ರೈತ ಕೆಂಪೇಗೌಡ ಬೊಲೆರೋ ಪಿಕಪ್ ಕಾರಿನ ಬಗ್ಗೆ ಮಾಹಿತಿ ಕೇಳಿದ್ದಾರೆ. ಆದರೆ ಸೇಲ್ಸ್ ಮನ್ ಈತ ರೈತ ಎಂದು ಗೊತ್ತಾಗುತ್ತಿದ್ದಂತೆ ಬಾಯಿಗೆ ಬಂದಂತೆ ನಿಂದಿಸಿ ಶೋರೂಂ ನಿಂದ ಹೊರಗೆ ಹೋಗುವಂತೆ ತಿಳಿಸಿದ್ದಾರೆ.
 
ಜೇಬಲ್ಲಿ 10 ರೂ. ಇಲ್ಲ. ಆದರೂ 10 ಲಕ್ಷ ರೂ. ಬೆಲೆಯ ಕಾರಿನ ಬಗ್ಗೆ ಕೇಳ್ತಿಯ? ಕಾರನ್ನು ಖರೀದಿಸುವ ಯೋಗ್ಯತೆ ನಿನಗಿದೆಯಾ? ಮೊದಲು ಹೊರಗೆ ಹೋಗು ಎಂದು ಅಪಮಾನಿಸಿದ್ದಾನೆ. ಆದರೆ ಕೆಂಪೇಗೌಡ ಒಂದು ಗಂಟೆಯಲ್ಲಿ ಹಣ ತರ್ತಿನಿ ಕಾರು ಡೆಲಿವರಿ ಕೊಡಲು ವ್ಯವಸ್ಥೆ ಮಾಡು ಎಂದು ಸವಾಲು ಹಾಕಿದ್ದಾನೆ.
 
ಕೆಂಪೇಗೌಡ, ಒಂದೇ ಗಂಟೆಯಲ್ಲಿ ಶೋ ರೂಂಗೆ ಮರಳಿದ್ದು, 10 ಲಕ್ಷ ರೂ. ತಂದು ಕಾರು ಕೊಡುವಂತೆ ಹೇಳಿದ್ದಾನೆ. ಆದರೆ ಸೇಲ್ಸ್ ಮನ್ ಆಘಾತಕ್ಕೆ ಒಳಗಾಗಿದ್ದು, ಕಾರು ಹಸ್ತಾಂತರಿಸಲು ಕನಿಷ್ಠ 4 ದಿನ ಬೇಕು ಎಂದು ಹೇಳಿದ್ದಾನೆ. ಆದರೆ ರೈತನನ್ನು ಅಪಮಾನಿಸುತ್ತಿಯ ಎಂದು ಕೆಂಪೇಗೌಡ ಮತ್ತು ಸ್ನೇಹಿತರು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಈ ವೇಳೆ ಪರಿಸ್ಥಿತಿ ಕೈ ಮೀರುವ ಹಂತ ತಲುಪುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಿಳಿಗೊಳಿಸಿದ್ದಾರೆ. ಈ ವೇಳೆ ಸೇಲ್ಸ್ ಮನ್ ಕ್ಷಮೆಯಾಚಿಸಿದ್ದು, ಕೆಂಪೇಗೌಡ, ನಿನ್ನ ಶೋ ರೂಂನಲ್ಲಿ ಕಾರು ಖರೀದಿಸುವುದಿಲ್ಲ ಎಂದು ಹೇಳಿ 10 ಲಕ್ಷ ರೂ.ನೊಂದಿಗೆ ಮರಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಮುಂದಿನ ಸುದ್ದಿ
Show comments