Webdunia - Bharat's app for daily news and videos

Install App

BBK11: ಹನುಮಂತನ ಮುಗ್ಧತೆಗೆ ಯಾರು ನೋವುಂಟು ಮಾಡದಿರಲಿ ಎಂದ ಅಭಿಮಾನಿಗಳು

Sampriya
ಬುಧವಾರ, 23 ಅಕ್ಟೋಬರ್ 2024 (15:59 IST)
Photo Courtesy X
ಬೆಂಗಳೂರು: ಬಿಗ್‌ಬಾಸ್‌ ಸೀಸನ್ 11ಕ್ಕೆ  ವೈಲ್ಡ್‌ಕಾರ್ಡ್ ಎಂಟ್ರಿಯಾಗಿರುವ ಗಾಯಕ ಹನುಮಂತ ಅವರ ಮುಗ್ದತೆಗೆ ಕನ್ನಡಿಗರು ಫಿದಾ ಆಗಿದ್ದಾರೆ. ಸರಳ ಹಾಗೂ ಹಳ್ಳಿ ಸೊಗಡಿನ ಭಾಷೆಯಿಂದ ಗಾಯನ ಲೋಕದಲ್ಲಿ ಮಿಂಚಿದ ಹನುಮಂತು ಇದೀಗ ಬಿಗ್‌ಬಾಸ್‌ ಮನೆಯಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ.

ದೊಡ್ಮನೆಗೆ ಹನುಮಂತ ಕಾಲೀಡುತ್ತಿದ್ದ ಹಾಗೇ ಬಿಗ್ ಬಾಸ್​ಗೆ ಸರಿಯಾದ ವ್ಯಕ್ತಿ ಅಲ್ಲ ಎನ್ನುವ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು. ಆದರೆ ಇದೀಗ ಹನುಮಂತು ಬಿಗ್‌ಬಾಸ್ ಪ್ರಿಯರು ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಆಗಾಗ ಹಾಡು ಹೇಳುತ್ತಾ, ತಮ್ಮ ಮುಗ್ಧತೆಯ ಮೂಲಕ ಮನೆಯವರ ಮನಸ್ಸನ್ನು ಗೆಲ್ಲುತ್ತಿದ್ದಾರೆ.

ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಹನುಮಂತ ಮುಗ್ಧತೆ ನೋಡಿ, ಆತನಿಗೆ ಯಾರು ನೋವಾಗದ ಹಾಗೇ ನಡೆದುಕೊಳ್ಳಿ ಎನ್ನುತ್ತಿದ್ದಾರೆ. ಕನ್ಫೆಷನ್​ರೂಂನಲ್ಲಿ ಮನೆಯಲ್ಲಿ ಅರ್ಹತೆ ಇಲ್ಲದ ಇಬ್ಬರು ಸದಸ್ಯರನ್ನು ನಾಮಿನೇಟ್ ಮಾಡಿ ಎಂದು ಹೇಳಿದಾಗ ಹನುಮಂತು ಹೆದರಿಕೊಂಡಿದ್ದಾನೆ.

ಇಲ್ಲಿ ಎಲ್ಲರೂ ಕೂಡಾ ಮನೆಯಲ್ಲಿ ಇರಲು ಅರ್ಹರಾದವರು ಎಂದಿದ್ದಾರೆ. ಅದಕ್ಕೆ ಬಿಗ್‌ಬಾಸ್‌ ಹಾಗೇ ಹೇಳುವ ಹಾಗೇ ಇಲ್ಲ, ಇಬ್ಬರು ವ್ಯಕ್ತಿಗಳನ್ನು ಆಯ್ಕೆ ಮಾಡಿ, ಇದು ಬಿಗ್‌ಬಾಸ್ ನಿಯಮ ಎಂದಿದ್ದಾರೆ. ಅದಕ್ಕೆ ಹನುಮಂತು ಹಂಸ ಅವರನ್ನು ಹಾಗೂ ತಾನೇ ಮನೆಯಲ್ಲಿಇರಲು ಅರ್ಹನಿಲ್ಲ ಎಂದಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು, ನಿಮ್ಮ ಮುಗ್ಧತೆಗೆ ಯಾರು ನೋವುಂಟು ಮಾಡದಿರಲಿ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಒಂದೇ ಯುವತಿಯನ್ನು ಮದುವೆಯಾದ ಸಹೋದರರು, ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ 6 ವರ್ಷದಲ್ಲಿ 5 ಮದುವೆ

ವಿಪಕ್ಷಗಳ ಬೇಡಿಕೆಯಂತೆ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್, ಪಹಲ್ಗಾಮ್ ದಾಳಿ ಬಗ್ಗೆ ಚರ್ಚೆ

ಬಾಂಗ್ಲಾದೇಶ ಫೈಟರ್ ಜೆಟ್‌ ದುರಂತ: 6 ತರಗತಿ ವಿದ್ಯಾರ್ಥಿ ಸೇರಿ 16 ಮಂದಿ ಸಾವು

ಕೇರಳ ಮಾಜಿ ಸಿಎಂ ವಿಎಸ್ ಅಚ್ಯುತಾನಂದನ್ ಇನ್ನಿಲ್ಲ

ಕೂಡಲಸಂಗಮದ ಸ್ವಾಮೀಜಿಯನ್ನು ಮುಗಿಸುವ ಯತ್ನ: ಅರವಿಂದ ಬೆಲ್ಲದ ಆರೋಪ

ಮುಂದಿನ ಸುದ್ದಿ
Show comments