Select Your Language

Notifications

webdunia
webdunia
webdunia
webdunia

ದರ ಕುಸಿತ: ಹೂವನ್ನು ನಾಶ ಮಾಡಿದ ರೈತ

ದರ ಕುಸಿತ: ಹೂವನ್ನು ನಾಶ ಮಾಡಿದ ರೈತ
ಮಂಡ್ಯ , ಮಂಗಳವಾರ, 26 ಸೆಪ್ಟಂಬರ್ 2023 (15:00 IST)
ಸೇವಂತಿ ಹೂವಿನ‌ ದರ ಕುಸಿತ ಹಿನ್ನಲೆ ಬೆಳೆದ ಹೂವನ್ನು ಸ್ವತಃ ರೈತ ನಾಶ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೇವಂತಿ ಹೂ ಬೆಳೆದು ರೈತನ ಬದುಕು ಬೀದಿಗೆ ಬಿದ್ದಿದೆ. ಪಾಂಡವಪುರ ಮತ್ತು ಕೆ.ಆರ್.ಪೇಟೆ ಭಾಗದಲ್ಲಿ ಹೂ ಕೃಷಿ ಮಾಡಿದ ರೈತ ಕುಟುಂಬಗಳು ಕಂಗಾಲಾಗಿವೆ. ಸೇವಂತಿ ಹೂವಿನ‌ ದರ ಕುಸಿತವಾದ್ದರಿಂದ ರೈತ ಕಂಗಾಲಾಗಿ ಬೆಳೆದ ಹೂವಿನ ಬೆಳೆಯನ್ನು ನಾಶ ಮಾಡಿದ್ದಾನೆ. ಹೂ ಕೀಳಿಸಿದ ಕೂಲಿಯೂ ಸಿಗದ ಕಾರಣಕ್ಕೆ ರೈತ ಹೂವಿನ ಬೆಳೆ ನಾಶ ಮಾಡಿದ್ದಾನೆ. ಮಳೆ ಇಲ್ಲದೆ ಇತ್ತ ಬೆಳೆದ ಬೆಳೆಗೆ ಬೆಲೆಯೂ ಇಲ್ಲದೆ ಕಂಗಾಲಾಗಿದ್ದಾರೆ. ಯೋಗರಾಜ್ ಬೆಳೆದ ಬೆಳೆಗೆ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ರಸ್ತೆಯ ಗಾಳಿ ಆಂಜನೇಯ ರಸ್ತೆಯಲ್ಲಿ ಪ್ರತಿಭಟನೆ