Select Your Language

Notifications

webdunia
webdunia
webdunia
webdunia

ಬಿಎಸ್ಪಿಯಿಂದ ಉಚ್ಛಾಟನೆ: ಶಾಸಕ ಮಹೇಶ್ ಹೇಳಿದ್ದೇನು?

ಬಿಎಸ್ಪಿಯಿಂದ ಉಚ್ಛಾಟನೆ: ಶಾಸಕ ಮಹೇಶ್ ಹೇಳಿದ್ದೇನು?
ಬೆಂಗಳೂರು , ಬುಧವಾರ, 24 ಜುಲೈ 2019 (14:40 IST)
ಯಾವುದೇ ಕಾರಣಕ್ಕೂ ಬಿಜೆಪಿಗೆ ಬೆಂಬಲ ಕೊಡೋದಿಲ್ಲ. ಹೀಗಂತ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರೋ ಶಾಸಕ ಎನ್.ಮಹೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬಳಸೋ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಸಂವಹನ ಕೊರತೆಯಿಂದಾಗಿ ಪಕ್ಷದಿಂದ ಮಾಯಾವತಿ ನನ್ನನ್ನ ಉಚ್ಛಾಟನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆ ಕಲಾಪದಲ್ಲಿ ಮೈತ್ರಿ ಸರಕಾರ ವಿಶ್ವಾಸ ಮತ ಯಾಚನೆ ಮಾಡಿದೆ. ಆಗ ತಟಸ್ಥರಾಗಿ ಉಳಿಯುವಂತೆ ನನಗೆ ಪಕ್ಷದಿಂದ ಈ ಹಿಂದೆ ನಿರ್ದೇಶನ ಬಂದಿತ್ತು. ಹೀಗಾಗಿ ಕಲಾಪದಲ್ಲಿ ಭಾಗಿಯಾಗಿರಲಿಲ್ಲ ಎಂದರು.  



Share this Story:

Follow Webdunia kannada

ಮುಂದಿನ ಸುದ್ದಿ

ಹಾಸನದಲ್ಲಿ ಲಾಠಿ ಚಾರ್ಜ್, ಗಾಳಿಯಲ್ಲಿ ಗುಂಡು