Select Your Language

Notifications

webdunia
webdunia
webdunia
webdunia

ಎಚ್.ವಿಶ್ವನಾಥ್ ಗೆ ಸವಾಲು ಹಾಕಿದ ಸಾ.ರಾ.ಮಹೇಶ್

ಎಚ್.ವಿಶ್ವನಾಥ್ ಗೆ ಸವಾಲು ಹಾಕಿದ ಸಾ.ರಾ.ಮಹೇಶ್
ಬೆಂಗಳೂರು , ಶನಿವಾರ, 20 ಜುಲೈ 2019 (13:23 IST)
ಬೆಂಗಳೂರು : ಒಂದು ಕಡೆ ಮೈತ್ರಿ ಸರ್ಕಾರ ಉರುಳುವ ಹಂತಕ್ಕೆ ಬಂದು ನಿಂತಿದ್ದರೆ ಇನ್ನೊಂದು ಕಡೆ ಮೈತ್ರಿ ಸರ್ಕಾರದ ಸಚಿವ ಸಾ.ರಾ.ಮಹೇಶ್ ಹಾಗೂ ಅತೃಪ್ತ ಶಾಸಕ  ಶಾಸಕ ಎಚ್.ವಿಶ್ವನಾಥ್ ಅವರ ನಡುವೆ ಸವಾಲುಗಳ ಸುರಿಮಳೆಯೇ ಹರಿದಿದೆ.



ಶುಕ್ರವಾರದ ಸದಸನ  ಕಲಾಪದ ವೇಳೆ ಸಾ.ರಾ.ಮಹೇಶ್ ಅವರು ಎಚ್.ವಿಶ್ವನಾಥ್ ಮೇಲೆ  28 ಕೋಟಿ ರೂಪಾಯಿಯ ಆರೋಪ ಮಾಡಿದ ಹಿನ್ನಲೆಯಲ್ಲಿ ಎಚ್.ವಿಶ್ವನಾಥ್ ಅವರು, ಸಾ.ರಾ.ಮಹೇಶ್ ಅವರಿಗೆ ಧೈರ್ಯವಿದ್ದರೆ ಹೊರಗಡೆ ಬಂದು ಪ್ರತಿಕಾಗೋಷ್ಠಿ ಮಾಡಿ ಆರೋಪ ಮಾಡಲಿ ಎಂದು ಸವಾಲು  ಹಾಕಿದ್ದರು.

 

ಇದೀಗ ಸುದ್ದಿಗೋಷ್ಟಿ ನಡೆಸಿದ ಸಾ.ರಾ.ಮಹೇಶ್ , ಎಚ್ ವಿಶ್ವನಾಥ್ ಅವರು ಸದನದಿಂದ ಹೊರತುಪಡಿಸಿರುವ ವ್ಯಕ್ತಿಯಲ್ಲ. ಅವರು ಸದನದ ಸದಸ್ಯರಾಗಿದ್ದಾರೆ. ಆದ್ದರಿಂದ ನಿಮಗೆ ಆತ್ಮಸಾಕ್ಷಿ, ಮನಸಾಕ್ಷಿ ಇದ್ದರೆ ಸೋಮವಾರ ಸದನಕ್ಕೆ ಬನ್ನಿ. ಬಹಿರಂಗವಾಗಿ ಹೇಳಿ.ನಾನು ಹೇಳಿರುವ ಮಾತಿನಲ್ಲಿ ತಪ್ಪಿದ್ದರೆ ರಾಜ್ಯದ ಜನತೆಯ ಮುಂದೆ ಕ್ಷಮೆ ಕೇಳುತ್ತೇನೆ. ಈಗಾಗಲೇ ನಾನು ಇನ್ಮುಂದೆ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದೇನೆ. ಅದೇ ಮಾತಿಗೆ ಬದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ರಾಮಲಿಂಗಾರೆಡ್ಡಿ ಜತೆ ದೇವೇಗೌಡರ ನಿವಾಸದಲ್ಲಿ ಭಾರೀ ಮೀಟಿಂಗ್! ಅತೃಪ್ತರ ಕರೆತರಲು ಕೊನೆಯ ಅಸ್ತ್ರ