Webdunia - Bharat's app for daily news and videos

Install App

Exclusive: ಸಿಗಂದೂರು ಲಾಂಚ್ ಮಜಾ ಇನ್ನು ಕೆಲವೇ ದಿನ ಮಾತ್ರ: ಸ್ಥಳೀಯರು ಹೇಳುವುದೇನು

Krishnaveni K
ಶನಿವಾರ, 15 ಫೆಬ್ರವರಿ 2025 (09:23 IST)
WD
ಸಾಗರ: ಸಿಗಂದೂರು ಚೌಡೇಶ್ವರಿ ಅಮ್ಮನ ದರ್ಶನ ಪಡೆಯುವಷ್ಟೇ ಲಾಂಚ್ ನಲ್ಲಿ ಶರವಾತಿ ಹಿನ್ನೀರು ಪ್ರದೇಶವನ್ನು ದಾಟುವ ಸಂಭ್ರಮ ಎಲ್ಲರಲ್ಲಿರುತ್ತದೆ. ಆದರೆ ಇದು ಇನ್ನು ಕೆಲವೇ ದಿನ ಮಾತ್ರ ಎಂಬುದು ಬೇಸರದ ಸಂಗತಿ.

ಸ್ವಾತಂತ್ರ್ಯ ಬಂದು ಇಷ್ಟು ದಿನವಾದರೂ ಇಲ್ಲಿ ಹಿನ್ನೀರು ದಾಟಬೇಕಾದರೆ ಲಾಂಚ್ ಮೊರೆ ಹೋಗಬೇಕಾಗಿತ್ತು. ಆದರೆ ಈಗಷ್ಟೇ ಸೇತುವೆ ನಿರ್ಮಾಣವಾಗುತ್ತಿದ್ದು ಬಹುತೇಕ ಕೊನೆಯ ಹಂತಕ್ಕೆ ಬಂದಿದೆ. ಹೀಗಾಗಿ ಇನ್ನು ಲಾಂಚ್ ನೆನಪು ಮಾತ್ರ ಎನ್ನಬಹುದು.

WD
ಇದರ ಬಗ್ಗೆ ಸ್ಥಳೀಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಇಲ್ಲಿ ಲಾಂಚ್ ನ್ನೇ ನಂಬಿಕೊಂಡು ಬದುಕುವ ಅನೇಕರಿದ್ದಾರೆ. ವಿಶೇಷವಾಗಿ ಜೀಪ್ ಚಾಲಕರು ಇದನ್ನೇ ಹೊಟ್ಟೆ ಪಾಡು ಮಾಡಿಕೊಂಡಿದ್ದಾರೆ. ಸಿಗಂದೂರು ಚೌಡೇಶ್ವರಿ ದೇವಾಲಯದಿಂದ ಹೊಳೆಬದಿಗೆ ಪ್ರತಿನಿತ್ಯವೂ ಬಾಡಿಗೆ ಮಾಡಿಕೊಳ್ಳುತ್ತಿದ್ದಾರೆ. ಇದು ಇಲ್ಲಿನ ಅನೇಕರಿಗೆ ಹೊಟ್ಟೆಪಾಡಿನ ವಿಚಾರ.

ಆದರೆ ಈಗ ಲಾಂಚ್ ಆಗುವುದರಿಂದ ಇಂತಹ ಜೀಪ್ ಮಾಲಿಕರಿಗೆ ಉದ್ಯೋಗವಿಲ್ಲದಂತಾಗುತ್ತದೆ. ಇನ್ನು ಲಾಂಚ್ ದಾಟುವ ಮಜಾ ಪಡೆಯುವುದಕ್ಕೆಂದೇ ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದಿದೆ. ಹೀಗಾಗಿ ಸಂಪೂರ್ಣವಾಗಿ ಲಾಂಚ್ ನಿಲ್ಲಿಸಿದರೆ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಬಹುದು ಎಂಬ ಆತಂಕವಿದೆ.

ಸ್ಥಳೀಯರ ಪ್ರಕಾರ ಇದರಿಂದ ಉಪಕಾರವೂ ಇದೆ. ಲಾಂಚ್ ಬರುವುದನ್ನು ಕಾಯುತ್ತಾ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಆದರೆ ಇನ್ನು ಸೇತುವೆ ಆದರೆ ಕಾಯುವ ಅಗತ್ಯವಿಲ್ಲ. ಹೀಗಾಗಿ ಸಮಯ ಉಳಿತಾಯವಾಗಬಹದು ಎಂಬ ನಂಬಿಕೆಯಿದೆ.

ಆದರೆ ಸೇತುವೆ ಪೂರ್ಣಗೊಳ್ಳಲು ಕನಿಷ್ಠ ಐದಾರು-ತಿಂಗಳು ಬೇಕಾದೀತು. ಅದಾದ ಬಳಿಕ ಶರಾವತಿ ಹಿನ್ನೀರಿನಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯಲು ಲಾಂಚ್ ಬಳಸಬಹುದು. ಅದೂ ಒಂದು ಪ್ರವಾಸೀ ಆಕರ್ಷಣೆಯಾಗಿ ಬಳಕೆಯಾದರೆ ಬಾಡಿಗೆ ಜೀಪ್, ಸ್ಥಳೀಯ ಸಣ್ಣ ಪುಟ್ಟ ಅಂಗಡಿ ಮಾಲಿಕರ ಜೀವನವೂ ನಿರಾತಂಕವಾಗಿ ನಡೆಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ನೆಹರೂ ತಾತ ನಮ್ಗೆ ರಾಜಕೀಯವೇ ಹೇಳಿ ಕೊಟ್ಟಿಲ್ಲ

ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿ ಮೇಲೆ ಅತ್ಯಾಚಾರ, ರೇಪಿಸ್ಟ್‌ ಕೊನೆಗೂ ಅರೆಸ್ಟ್‌

ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ: ಸಾವಿನ ಹಿಂದೆ ಮುಸ್ಲಿಂ ಯುವಕನ ಕಿರುಕುಳ ಆರೋಪ

Viral Video:ರನ್ಯಾ ರಾವ್ ಪ್ಲ್ಯಾನ್‌ಗಿಂತಲೂ ಖತರ್ನಾಕ್ ಆಗಿ ಮದ್ಯದ ಬಾಟಲಿ ಎಗರಿಸಿದ ಮಹಿಳೆ, ನೋಡಿದ್ರೆ ಶಾಕ್ ಆಗ್ತೀರಾ

Viral Video:ಜನರನ್ನು ರಕ್ಷಣೆ ಮಾಡಬೇಕಿದ್ದ ಪೊಲೀಸ್‌ ಅನ್ನೇ ಕೈ ಹಿಡಿದು ನಡೆಸುವ ಸ್ಥಿತಿ, ಈ ರೀತಿಯಾದ್ರೆ ಏನ್‌ ಕತೆ

ಮುಂದಿನ ಸುದ್ದಿ
Show comments