Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ: ವರ್ಕ್​ ಫ್ರಂ ಹೋಂಗೆ ಸುಪ್ರೀಂ ಸಲಹೆ

ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ: ವರ್ಕ್​ ಫ್ರಂ ಹೋಂಗೆ ಸುಪ್ರೀಂ ಸಲಹೆ
bangalore , ಮಂಗಳವಾರ, 16 ನವೆಂಬರ್ 2021 (22:04 IST)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಸ್ಥಿತಿ ಚಿಂತಾಜನಕ ತಲುಪಿರುವಂತೆ ಸುಪ್ರೀಂ ಕೋರ್ಟ್​ ಇಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ಪ್ರತಿಕ್ರಿಯೆಗಳನ್ನು ಪಡೆದು ವಿಶ್ಲೇಷಣೆ ನಡೆಸಿತು.
ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ​(ಎನ್​ಸಿಆರ್​)ದ ವಾಯುಮಾಲಿನ್ಯದ ಸಮಸ್ಯೆಗೆ ಪ್ರಮುಖ ಕಾರಣಗಳೆಂದರೆ ಧೂಳು, ಸಾರಿಗೆ ವಾಹನಗಳು, ಕೈಗಾರಿಕೆಗಳು, ವಾಹನ ದಟ್ಟಣೆ ಮತ್ತು ಕೆಲವು ಪ್ರದೇಶಗಳಲ್ಲಿ ರೈತರು ಹೊಲಕ್ಕೆ ಬೆಂಕಿಹಚ್ಚುವ ರೂಢಿ ಹೊಂದಿರುವುದು ಎಂದು ಕೋರ್ಟ್​ ಹೇಳಿದೆ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ನಾಳೆ(ನ.16) ತುರ್ತುಸಭೆಯೊಂದನ್ನು ನಡೆಸಲು ಸುಪ್ರೀಂ ಕೋರ್ಟ್​ ಸೂಚಿಸಿದೆ. ಈ ಸಭೆಯಲ್ಲಿ ದೆಹಲಿ-ಎನ್​ಸಿಆರ್​ನಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸುವುದು, ಅನಗತ್ಯ ವಾಹನ ಸಂಚಾರ ಮತ್ತು ವಿದ್ಯುತ್​​ ಘಟಕ​ಗಳನ್ನು ನಿಲ್ಲಿಸುವುದು, ನಾಗರೀಕರಿಗೆ ವರ್ಕ್​ ಫ್ರಂ ಹೋಂ ಅವಕಾಶ ಕಲ್ಪಿಸುವುದು ಮುಂತಾದ ಬಗ್ಗೆ ಚರ್ಚಿಸಲು ಕೋರ್ಟ್​ ನಿರ್ದೇಶಿಸಿದೆ.
ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಎನ್​ಸಿಆರ್​ ಪ್ರದೇಶಗಳನ್ನು ಹೊಂದಿರುವ ಇತರ ರಾಜ್ಯಗಳಾ ಪಂಜಾಬ್​, ಉತ್ತರಪ್ರದೇಶ ಮತ್ತು ಹರಿಯಾಣದ ಮುಖ್ಯ ಕಾರ್ಯದರ್ಶಿಗಳು ಈ ತುರ್ತು ಸಭೆಯಲ್ಲಿ ಭಾಗವಹಿಸಬೇಕು. ಸಭೆಯಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳವವರೆಗೆ, ಈ ಪ್ರದೇಶದ ಸರ್ಕಾರಿ ನೌಕರರಿಗೆ ವರ್ಕ್​​ ಫ್ರಂ ಹೋಂ ಕಡ್ಡಾಯಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ ನ್ಯಾಯಪೀಠ ಆದೇಶಿಸಿದೆ.
ವಿಚಾರಣೆಯನ್ನು ನ.17ರ ಬುಧವಾರಕ್ಕೆ ಮುಂದೂಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆರಿಗೆ ಕಟ್ಟದ ಮಂತ್ರಿ ಮಾಲ್: BBMP ಯಿಂದ ಮತ್ತೆ ಬಿತ್ತು ಬೀಗ