Select Your Language

Notifications

webdunia
webdunia
webdunia
webdunia

ಪಿಯು ಕಾಲೇಜುಗಳಲ್ಲಿ ಪರೀಕ್ಷೆ : ಹಿಜಾಬ್ ಸಂಘರ್ಷದಿಂದ ಪರೀಕ್ಷೆ ಮಿಸ್ ಆದರೆ ಮತ್ತೆ ಅವಕಾಶ ಇಲ್ಲ

ಪಿಯು ಕಾಲೇಜುಗಳಲ್ಲಿ  ಪರೀಕ್ಷೆ : ಹಿಜಾಬ್ ಸಂಘರ್ಷದಿಂದ ಪರೀಕ್ಷೆ ಮಿಸ್ ಆದರೆ ಮತ್ತೆ ಅವಕಾಶ ಇಲ್ಲ
bangalore , ಸೋಮವಾರ, 21 ಫೆಬ್ರವರಿ 2022 (18:12 IST)
ರಾಜ್ಯದಲ್ಲಿ ಹಿಜಾಬ್ ವಿವಾದ ಇನ್ನೂ ಮುಗಿದಿಲ್ಲ. ರಾಜ್ಯದ ಹಲವು ಭಾಗಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಶಾಲೆಗೆ ಬರುತ್ತಿದ್ದಾರೆ.
ಹಿಜಾಬ್ ವಿವಾದದ ನಡುವೆಯೇ ಪಿಯು ಕಾಲೇಜುಗಳಲ್ಲಿ ಇಂದಿನ ಪ್ರಾಯೋಗಿಕ ಪರೀಕ್ಷೆ ಆರಂಭವಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯಂತೆಯೇ ಪರೀಕ್ಷೆ. ಹಿಜಾಬ್ ವಿವಾದದಿಂದ ಪರೀಕ್ಷೆಗೆ ಗೈರಾದರೆ ಮತ್ತೆ ಪರೀಕ್ಷೆಗೆ ಅವಕಾಶ ಇರುವುದಿಲ್ಲ.
ಹಿಜಾಬ್ ಸಂಘರ್ಷದ ನಡುವೆ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಈ ಕಾರಣದಿಂದ ಪರೀಕ್ಷಾ ಕೇಂದ್ರಗಳ ಮುಂದೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ. ಕೆಲ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಬಂದರೆ, ಇನ್ನುಳಿದವರು ಯೋಚಿಸುತ್ತಾ ಹೊರಗೇ ನಿಂತಿದ್ದಾರೆ.
ಇನ್ನು ಈ ಮಧ್ಯೆ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ನಡೆದಿದ್ದು, ಇದಕ್ಕೂ ಹಿಜಾಬ್ ವಿವಾದಕ್ಕೂ ಸಂಬಂಧವಿಲ್ಲ. ಆರೋಪಿ ಬಗ್ಗೆ ಸುಳಿವು ಸಿಕ್ಕಿದೆ ಶೀಘ್ರ ಬಂಧಿಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿಜಯಪುರದಲ್ಲಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡದ ಕಾರಣ 40 ವರ್ಷಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿದ್ದಾರೆ. ಕೊಪ್ಪಳ ಹಾಗೂ ಶಿವಮೊಗ್ಗದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಮುಂದುವರಿದಿದೆ.
ಹಿಜಾಬ್ ಸಂಘರ್ಷದಿಂದ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಪ್ರಾಯೋಗಿಕ ಅಂಕ ಸಿಗುವುದಿಲ್ಲ. ಗೈರಾದ ವಿದ್ಯಾರ್ಥಿಗಳು 70 ಅಂಕಗಳಿಗೆ ಮಾತ್ರ ಪರೀಕ್ಷೆ ಎದುರಿಸಬೇಕಾಗಿದೆ. ಉತ್ತರರಾಗಲು ಥಿಯರಿಯಲ್ಲಿ70 ಅಂಕಕ್ಕೆ 35 ಅಂಕ ಪಡೆದಿರಬೇಕು ಹಾಗೂ ಸಿಇಟಿ ಪರೀಕ್ಷೆ ಎದುರಿಸಬೇಕೆಂದರೆ ಕನಿಷ್ಠ 45 ಅಂಕ ಪಡೆಯಲೇಬೇಕು. ಭವಿಷ್ಯದ ಕಾರಣದಿಂದ ಪ್ರಾಯೋಗಿಕ ಪರೀಕ್ಷೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನತೆಗೆ ಸಂತಸದ ಸುದ್ದಿ: ಇನ್ನು ಮುಂದೆ ಪಡಿತರ ಅಂಗಡಿಗಳಲ್ಲೂ ಆ ಸೇವೆಗಳು