Webdunia - Bharat's app for daily news and videos

Install App

ಬೋಟ್ ಇಂಜಿನ್ ನಲ್ಲಿ ದೋಷ : ಅದರಲ್ಲಿದ್ದವರ ಪಾಡು ಏನಾಯಿತು?

Webdunia
ಬುಧವಾರ, 18 ಸೆಪ್ಟಂಬರ್ 2019 (14:59 IST)
ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಕರ್ನಾಟಕ ಮೂಲದ ಎನ್ಎಸ್ ಜಿ ಎಂಬ ಹೆಸರಿನ ಬೋಟ್ ಸಮುದ್ರ ನಡುವೆ ತಾಂತ್ರಿಕ ದೋಷಕ್ಕೆ ಒಳಗಾಗಿದೆ.

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಮೀನುಗಾರಿಕಾ ಬೋಟ್ ಹಾಗೂ ಅದರಲ್ಲಿದ್ದ 23 ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಕರ್ನಾಟಕ ಮೂಲದ ಎನ್ಎಸ್ ಜಿ ಎಂಬ ಹೆಸರಿನ ಬೋಟ್ ಭಟ್ಕಳ ಸಮೀಪದ ಸಮುದ್ರ ತೀರದಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿರೋ ಮಾವಿನಕುರ್ಲೆ ಎಂಬಲ್ಲಿ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ಈ ಮೀನುಗಾರಿಕಾ ಬೋಟ್ ನಲ್ಲಿ 23 ಮಂದಿ ಮೀನುಗಾರರಿದ್ದರು. ಮೀನುಗಾರಿಕಾ ಬೋಟ್ ಅಪಾಯದಲ್ಲಿರುವ ಬಗ್ಗೆ ಮಾಹಿತಿಯನ್ನು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಕೋಸ್ಟ್ ಗಾರ್ಡ್ ಶಿಫ್ ರಾಜದೂತ್ ಗೆ ನೀಡಲಾಗಿತ್ತು. ಕೂಡಲೇ ಕಾರ್ಯಾಚರಣೆಗೆ ಇಳಿದ ಕೋಸ್ಟ್ ಗಾರ್ಡ್ ಶಿಫ್ ರಾಜದೂತ್, ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ ನ ತಾಂತ್ರಿಕ ದೋಷ ಸರಿಪಡಿಸಲು ಪ್ರಯತ್ನಿಸಿದೆ.

ಆದರೆ ಇಂಜಿನ್ ತಾಂತ್ರಿಕ ದೋಷ ಸರಿಯಾಗದ ಕಾರಣ ಬೋಟ್ ನಲ್ಲಿದ್ದ 23 ಮಂದಿ ಮೀನುಗಾರರನ್ನು ರಕ್ಷಿಸಿದೆ. ನಂತರ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದ ಮತ್ತೊಂದು ಮೀನಗಾರಿಕಾ ಬೋಟ್ ಪವನಸುತ ಮೂಲಕ ಇಂಜಿನ್ ವೈಫಲ್ಯ ಹೊಂದಿದ ಬೋಟ್ ನ್ನು ಭಟ್ಕಳ ಸಮುದ್ರ ತೀರಕ್ಕೆ ತರಲಾಗಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments