Select Your Language

Notifications

webdunia
webdunia
webdunia
webdunia

ರಾಜ್ಯದ ಮೀನುಗಾರರಿಗೆ ಸಿಹಿಸುದ್ಧಿ ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ

ರಾಜ್ಯದ ಮೀನುಗಾರರಿಗೆ ಸಿಹಿಸುದ್ಧಿ ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು , ಗುರುವಾರ, 22 ಆಗಸ್ಟ್ 2019 (10:24 IST)
ಬೆಂಗಳೂರು : ತೆರಿಗೆ ರಹಿತ ಡೀಸೆಲ್ ನೀಡುವಂತೆ ಆದೇಶಿಸುವುದರ ಮೂಲಕ ರಾಜ್ಯದ ಮೀನುಗಾರರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.




ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಮಲ್ಫೆ ಮೀನುಗಾರರ ನಿಯೋಗ ಸಿಎಂ ಭೇಟಿಯಾಗಿ ಕೆಲವು ಬೇಡಿಕೆ ಮುಂದಿಟ್ಟಿತು. ಈ ವೇಳೆ  ಉಡುಪಿ ಶಾಸಕ ರಘುಪತಿ ಭಟ್ ಹಾಗೂ ಮಲ್ಪೆ ಮೀನುಗಾರರ ನಿಯೋಗದ ಸದಸ್ಯರು ಹಾಜರಿದ್ದರು.


ಅವರ ಬೇಡಿಕೆಗೆ ಸಮ್ಮತಿ ನೀಡಿರುವ ಸಿಎಂ, ಮೀನುಗಾರರ ಯಾಂತ್ರೀಕೃತ ಬೋಟ್ ಗಳಿಗೆ ಡೆಲಿವರಿ ಪಾಯಿಂಟ್ ನಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವಂತೆ ಹಾಗೂ ತೆರಿಗೆ ರಹಿತ ಡೀಸೆಲ್ ತೆರಿಗೆ ರಹಿತ ಡೀಸೆಲ್ ಪ್ರಮಾಣವನ್ನು 300 ಲೀಟರ್ ನಿಂದ 400 ಲೀಟರ್ ಗೆ ಹೆಚ್ಚಿಸುವಂತೆ ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಚಾರ್ಯ ವಿರುದ್ಧ ಸಿಎಂ ಗರಂ ಆಗಿದ್ದೇಕೆ?