Webdunia - Bharat's app for daily news and videos

Install App

ಪತ್ನಿಯನ್ನು ಮನೆಯಿಂದ ಹೊರಹಾಕಿದ ಕುಡುಕ ಪತಿ!

Webdunia
ಶುಕ್ರವಾರ, 5 ಆಗಸ್ಟ್ 2022 (15:56 IST)
ಬೆಂಗಳೂರು : ಅವಳು ಎಂಜಿನಿಯರ್ ಓದಿಕೊಂಡ ವಿದ್ಯಾವಂತ ಯುವತಿ.
 
ಆದರೆ ಒಬ್ಬನೇ ಮಗ, ಸ್ವಂತ ಮನೆ ಬೇರೆ ಇದೆ ಅಂತಾ ಬಿಬಿಎಂಪಿ ಕಾಂಟ್ರಾಕ್ಟರ್ ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗ್ರ್ಯಾಂಡ್ ಆಗಿ ಮದುವೆ ಮಾಡಿಕೊಟ್ಟಿದ್ರು. ಆದ್ರೆ ಮದುವೆಯಾದ ಮೂರೇ ತಿಂಗಳಿಗೆ, ಪತ್ನಿಯನ್ನು ಬಟ್ಟೆ ಬರೇ ಸಮೇತ ಗಂಡನ ಮನೆಯವರು ಬೀದಿಗೆ ತಳ್ಳಿದ್ದಾರೆ.

ಸದ್ಯ ಅನ್ಯಾಯಕ್ಕೊಳಗಾಗಿ ಅಸಹಾಯಕಳಾಗಿ ನಿಂತಿರುವುದು ಬೆಂಗಳೂರಿನ ನಗರವಾಸಿ ಭವ್ಯ. ಈಕೆ ಎಂಜಿನಿಯರಿಂಗ್ ಓದಿದ ವಿದ್ಯಾವಂತೆ.
ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಒಳ್ಳೆ ಕಡೆಗೆ ಮದುವೆ ಮಾಡಿಕೊಡಬೇಕು ಎಂದು ಪೋಷಕರು, ಮ್ಯಾಟ್ರಿಮೋನಿಯಲ್ಲಿ ಭವ್ಯಳ ಡಿಟೈಲ್ಸ್ ಹಾಕಿದ್ರು. ಅಷ್ಟರಲ್ಲೇ ಓರ್ವ ತಾನು ಬಿಬಿಎಂಪಿ ಕ್ಲಾಸ್-1 ಕಂಟ್ರಾಕ್ಟರ್ ನಾನು ಕೂಡ ಎಂಜಿನಿಯರಿಂಗ್ ಮಾಡಿಕೊಂಡಿದ್ದೀನಿ.

ನಾಗರಭಾವಿಯಲ್ಲಿ ಸ್ವಂತ ಮನೆಯಿದೆ. ಜೊತೆಗೆ ಒಬ್ಬನೇ ಮಗ ಅಂತಾ ಭವ್ಯ ಕುಟುಂಬದ ಬಳಿ ಮದುವೆ ಪ್ರಸ್ತಾಪ ಮಾಡಿದ್ದಾನೆ. ಯುವತಿ ಮನೆಯವರು ಕೂಡ ಹೇಗೋ ನಮ್ ಹುಡುಗಿ ಚೆನ್ನಾಗಿದ್ರೆ ಸಾಕು ಅಂತಾ 50 ಲಕ್ಷ ಖರ್ಚು ಮಾಡಿ ಕಳೆದ ಮೂರು ತಿಂಗಳ ಹಿಂದೆಯೇ ಕೇಳಿದ್ದ ರೆಸಾರ್ಟ್ನಲ್ಲೇ ಮದುವೆ ಮಾಡಿಕೊಟ್ಟಿದ್ರು. 

ಮದುವೆಯಾದ ಒಂದೇ ವಾರಕ್ಕೆ ಈ ಪುರುಷ ಮಹಾಷಯನ ಬಂಡವಾಳ ಬಯಲಾಗೋಕೆ ಶುರುವಾಗಿದೆ.

ಇಷ್ಟೇ ಅಲ್ಲದೇ ಪ್ರತಿದಿನ ಗಂಡ-ಅತ್ತೆ-ಮಾವ-ನಾದಿನಿ ಸೇರಿಕೊಂಡು ಮನೆಯಲ್ಲೇ ಪ್ರತಿದಿನ ಒಟ್ಟಿಗೇ ಕೂತು ಎಣ್ಣೆ ಪಾರ್ಟಿ ಮಾಡುತ್ತಿದ್ದರಂತೆ. ಅದಕ್ಕೆ ಬೇಕಾದ ಎಲ್ಲಾ ಸ್ನಾಕ್ಸ್ ಭವ್ಯಳೇ ಮಾಡಿ ತಗೋಬರಬೇಕಿತ್ತು.

`ಏನ್ರಿ ರೀ ಇದು ಅಂತಾ ಪ್ರಶ್ನೇ ಮಾಡಿದ್ರೆ’, ಹೇಳಿದಷ್ಟು ಮಾಡಬೇಕು ಅಂತಾ ಪತ್ನಿ ಮೇಲೆ ಹಿಗ್ಗಾಮುಗ್ಗ ಥಳಿಸುತ್ತಿದ್ದನಂತೆ. ಕಳೆದ ಕೆಲ ದಿನಗಳಿಂದ ಇದೇ ರೀತಿ ಕಿರುಕುಳ ಕೊಡ್ತಿದ್ದ ಗಂಡನ ಮನೆಯವರು. ನಿನ್ನೆ ಏಕಾಏಕಿ ಭವ್ಯಳ ಎಲ್ಲಾ ಬಟ್ಟೆಗಳನ್ನು ಹೊರಗೆ ಎಸೆದು ಆಕೆಯನ್ನು ಸುರಿಯುವ ಮಳೆಯಲ್ಲೇ ಹೊರಗೆ ತಬ್ಬಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೀದಿನಾಯಿಗಳಿಗೆ ಬಿರಿಯಾನಿ ಆಯ್ತು, ಈಗ ಬಿಬಿಎಂಪಿಯಿಂದ ಟ್ರೈನಿಂಗ್ ಭಾಗ್ಯ

ಡಾ ಸಿಎನ್ ಮಂಜುನಾಥ್ ಪ್ರಕಾರ ಮೊಬೈಲ್ ಎಲ್ಲಿ ಇಟ್ಟುಕೊಂಡರೆ ಆರೋಗ್ಯಕ್ಕೆ ಉತ್ತಮ

ಕೃಷ್ಣನನ್ನು‌ ತೂಗಿದ ಸ್ಪೀಕರ್ ಯುಟಿ ಖಾದರ್ ಗೆ ನೆಟ್ಟಿಗರು ಹೀಗೇ ಹೇಳೋದಾ

ಕ್ರೀಡಾ ಸಾಮಾಗ್ರಿ ಖರೀದಿಸುವಾಗ ಎಚ್ಚರ ತಪ್ಪಿದ್ರೆ ಆಗುತ್ತೆ ಪಂಗನಾಮ

ಧರ್ಮಸ್ಥಳ ಬುರುಡೆ ರಹಸ್ಯ: ಯಾವಾಗ ಕೈ ಸೇರುತ್ತೆ ಗೊತ್ತಾ ಎಫ್‌ಎಸ್‌ಎಲ್ ವರದಿ

ಮುಂದಿನ ಸುದ್ದಿ
Show comments