Select Your Language

Notifications

webdunia
webdunia
webdunia
webdunia

ಕುಡಿತದ ಅಮಲಿನಲ್ಲಿ ಪೊಲೀಸ್‌ ಮೇಲೆ ಹಲ್ಲೆ

crime

geetha

ಸಿರಸಿ , ಸೋಮವಾರ, 5 ಫೆಬ್ರವರಿ 2024 (20:04 IST)
ಸಿರಸಿ  :   ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರ ಮೇಲೆ  ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿದ ಆರೋಪದಡಿಯಲ್ಲಿ ಮಾಜಿ ಶಾಸಕ ವಿ.ಎಸ್‌.ಪಾಟೀಲ್‌ ಅವರ ಪುತ್ರ ಬಾಪೂಗೌಡ ಪಾಟೀಲ್‌ ಗೆ ಜೈಲುಶಿಕ್ಷೆ ವಿಧಿಸಲಾಗಿದೆ. 2011 ರಲ್ಲಿ ಈ ಪ್ರಕರಣ ನಡೆದಿದ್ದು, ಸರ್ಕಾರಿ ಐಬಿಯಲ್ಲಿ ಬಾಪೂಗೌಡ ಮದ್ಯದ ಅಮಲಿನಲ್ಲಿ ರಂಪಾಟ ನಡೆಸಿ ಪೊಲೀಸ್‌ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದ.ಪ್ರಕರಣದಲ್ಲಿ ಬಾಪೂಗೌಡ ಅಪರಾಧ ಸಾಬೀತಾಗಿದ್ದು, ಅವನನ್ನು ಬಂಧಿಸಿ ಶಿರಸಿಯ ಸಬ್‌ ಜೈಲಿಗೆ ಕಳಿಸಲಾಗಿದೆ.

ಮುಂಡಗೋಡ ವಿಧಾನ ಸಭಾ ಕ್ಷೇತ್ರದಲ್ಲಿ ವಿ.ಎಸ್‌. ಪಾಟೀಲ್‌ ಶಾಸಕರಾಗಿ ಆಯ್ಕೆಯಾಗಿದ್ದರು. ಈ ವೇಳೆ ಅಧಿಕಾರಿದ ಮದದಿಂದ ಪೊಲೀಸ್‌ ಇನ್ಸ್‌ ಪೆಕ್ಟರ್‌ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನಿಸಿದ್ದ. ಅಪಮಾನಕ್ಕೊಳಗಾದ ಪೊಲೀಸ್‌ ಅಧಿಕಾರಿ ದೂರು ದಾಖಲಿಸಿದ್ದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಲೇಜು ಯುವತಿಗೆ ಪೋಲಿ ಮೆಸೇಜ್‌