Select Your Language

Notifications

webdunia
webdunia
webdunia
webdunia

ಮುಗುಚಿದ ದೋಣಿ; NDRF ಸಿಬ್ಬಂದಿ ಬದುಕುಳಿದದ್ದೇ ಪವಾಡ

ಮುಗುಚಿದ ದೋಣಿ; NDRF ಸಿಬ್ಬಂದಿ ಬದುಕುಳಿದದ್ದೇ ಪವಾಡ
ಕೊಪ್ಪಳ , ಸೋಮವಾರ, 12 ಆಗಸ್ಟ್ 2019 (16:16 IST)
ನೆರೆ ಪೀಡಿತರನ್ನು ರಕ್ಷಿಸಲು ತೆರಳುತ್ತಿದ್ದ ಎನ್ ಡಿ ಆರ್ ಎಫ್ ಸಿಬ್ಬಂದಿಯಿದ್ದ ದೋಣಿ ಮುಗುಚಿ ಅದರಲ್ಲಿನ ಸಿಬ್ಬಂದಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.


ಕೊಪ್ಪಳ ಜಿಲ್ಲೆಯ ಗಂಗಾವತಿ ಹತ್ತಿರದ ವಿರುಪಾಪುರ ಗಡ್ಡಿಯಲ್ಲಿ ಈ ಘಟನೆ ನಡೆದಿದೆ.

ಗಡ್ಡಿಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲು ದೋಣಿಯಲ್ಲಿ ಐವರು ಎನ್ ಡಿ ಆರ್ ಎಫ್ ಸಿಬ್ಬಂದಿ ತೆರಳುತ್ತಿದ್ದರು. ಆಗ ನೀರಿನ ಸೆಳೆತಕ್ಕೆ ದೋಣಿ ಮುಗುಚಿಬಿದ್ದಿದೆ. ಇದರಿಂದ ನಾಲ್ವರು ಸಿಬ್ಬಂದಿಯನ್ನು ರಕ್ಷಣೆ ಮಾಡಲಾಯಿತು.

ನೀರಿನಲ್ಲಿಯೇ ಇದ್ದ ಗಿಡವೊಂದನ್ನು ಹಿಡಿದುಕೊಂಡಿದ್ದ ಮತ್ತೊಬ್ಬ ಸಿಬ್ಬಂದಿ ಎರಡು ಗಂಟೆಗಿಂತಲೂ ಹೆಚ್ಚು ಕಾಲ ಗಿಡವನ್ನು ಆಸರೆಗಾಗಿ ಹಿಡಿದುಕೊಂಡೇ ಇದ್ರು. ಅವರನ್ನೂ ಹೆಲಿಕಾಪ್ಟರ್ ಬಳಸಿ ರಕ್ಷಣೆ ಮಾಡಲಾಯಿತು.  



Share this Story:

Follow Webdunia kannada

ಮುಂದಿನ ಸುದ್ದಿ

ನಷ್ಟದಲ್ಲಿದ್ದ ಕಂಪನಿ ಒಂದೇ ವರ್ಷದಲ್ಲಿ ಗಳಿಸಿದ್ದು 348.59 ಕೋಟಿ ಲಾಭ