Select Your Language

Notifications

webdunia
webdunia
webdunia
webdunia

ಮನೆಗೆ ಹೋಗಬೇಕಾದವ ಕೃಷ್ಣಾ ನದಿ ಪಾಲು

ಮನೆಗೆ ಹೋಗಬೇಕಾದವ ಕೃಷ್ಣಾ ನದಿ ಪಾಲು
ಚಿಕ್ಕೋಡಿ , ಶುಕ್ರವಾರ, 9 ಆಗಸ್ಟ್ 2019 (18:47 IST)
ಮನೆಗೆ ಅಂತ ಹೊರಟಿದ್ದ ವ್ಯಕ್ತಿಯೊಬ್ಬರು ಕೃಷ್ಣಾನದಿ ನೀರಿನ ಪಾಲಾಗಿರೋ ಘಟನೆ ನಡೆದಿದೆ.

ಕೃಷ್ಣಾ ನದಿ ಪ್ರವಾಹ ಹೆಚ್ಚಾಗಿದ್ದು, ಮಳೆಯೂ ತನ್ನ ರೌದ್ರ ನರ್ತನ ಮುಂದುವರಿಸಿದೆ. ಇಂಥದ್ದರಲ್ಲಿ ನದಿನೀರಿಗೆ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.

ರಾಯಬಾಗ ತಾಲೂಕಿನ ಗೂಂಡವಾಡ ಗ್ರಾಮದ ಬಳಿ ಘಟನೆ ನಡೆದಿದೆ.

ಗೂಂಡವಾಡದಿಂದ ಕುಡಚಿ ಪಟ್ಟಣಕ್ಕೆ ಹೋಗುವಾಗ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ ವ್ಯಕ್ತಿ.

ಗುಂಡು ಅಪ್ಪಾಸಾಬ ಅಂಗಲಿ (33) ನೀರು ಪಾಲಾಗಿದ್ದಾರೆ. ರಾಯಬಾಗ ತಾಲೂಕಿನ ಗೂಂಡವಾಡ ನಿವಾಸಿಯಾಗಿರೋ ಗುಂಡು ತುಂಬಿ ಹರಿಯುತ್ತಿರುವ ಕೃಷ್ಣಾ ನದಿ ನೀರಿನ ಪಾಲಾಗಿದ್ದಾರೆ. ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್.ಯಡಿಯೂರಪ್ಪ ಕಣ್ಣ ಮುಂದೆಯೇ ಸಂತ್ರಸ್ಥರ ಮೇಲೆ ಲಾಠಿ ಚಾರ್ಜ್