Select Your Language

Notifications

webdunia
webdunia
webdunia
webdunia

ನದಿಯಲ್ಲಿ ಕಾರು ಚಾಲನೆ: ಉದ್ಯಮಿ ಪುತ್ರನ ಮೇಲೆ ಬಿತ್ತು ಕೇಸ್

ನದಿಯಲ್ಲಿ ಕಾರು ಚಾಲನೆ: ಉದ್ಯಮಿ ಪುತ್ರನ ಮೇಲೆ ಬಿತ್ತು ಕೇಸ್
ಮಂಡ್ಯ , ಮಂಗಳವಾರ, 1 ಜನವರಿ 2019 (16:17 IST)
KRS ಹಿನ್ನೀರಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಘಟನೆಗೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರ ಪುತ್ರನ ವಿರುದ್ಧ ಕೇಸ್ ದಾಖಲಾಗಿದೆ.

ಉದ್ಯಮಿ ಪುತ್ರ ವಿಕ್ರಮ್ ಧರ್ಮ ವಿರುದ್ದ FIR ದಾಖಲು ಮಾಡಲಾಗಿದೆ.  KRS ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದ್ದು, ವಿಕ್ರಮ್ ಧರ್ಮ ಮೈಸೂರಿನ ಹೋಟೆಲ್ ಉದ್ಯಮಿ ಧರ್ಮ ಪ್ರಕಾಶ್ ಎಂಬುವರ ಪುತ್ರನಾಗಿದ್ದಾನೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ KRS ಅಣೆಕಟ್ಟೆ ನಿಷೇಧಿತ ಹಿನ್ನೀರಿನ ಪ್ರದೇಶದಲ್ಲಿ ಒಳಪ್ರವೇಶಿಸಿ ಸ್ನೇಹಿತರೊಂದಿಗೆ ನದಿಯಲ್ಲಿ ಕಾರು ಚಲಾಯಿಸಿದ್ದ ವಿಕ್ರಮ್ ನದಿಯಲ್ಲಿ ಕಾರು ಚಲಾವಣೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ಕೊಟ್ಟ ದೂರಿನ ಅನ್ವಯ FIR ದಾಖಲು ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಟ್ರಾನ್ಸ್ ಜೆಂಡರ್ ಬಿಲ್ ‌‌ ಹಿಂಪಡೆಯಲು ಮಂಗಳಮುಖಿಯರ ಆಗ್ರಹ