ಡಾ ಕೃತಿಕಾ ರೆಡ್ಡಿ ಪೋಸ್ಟ್ ಮಾರ್ಟಂ ಮಾಡದಂತೆ ಡಾ ಮಹೇಂದ್ರ ರೆಡ್ಡಿ ಮಾಡಿದ್ದ ಉಪಾಯವೇನು

Krishnaveni K
ಗುರುವಾರ, 16 ಅಕ್ಟೋಬರ್ 2025 (10:48 IST)
Photo Credit: Instagram
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆ ಡಾ ಕೃತಿಕಾ ರೆಡ್ಡಿ ಸಾವಿನ ನಂತರ ಪತಿ ಡಾ ಮಹೇಂದ್ರ ರೆಡ್ಡಿ ತನ್ನ ಕೃತ್ಯ ಬಯಲಾಗಬಾರದು ಎಂದು ಪೋಸ್ಟ್ ಮಾರ್ಟಂ ಮಾಡದಂತೆ ಯಾವೆಲ್ಲಾ ನಾಟಕವಾಡಿದ್ದ ಎಂಬುದು ಈಗ ಬಯಲಾಗಿದೆ.

ಮದುವೆಯಾದ 11 ತಿಂಗಳಲ್ಲೇ ಪತಿ ಮಹೇಂದ್ರ ರೆಡ್ಡಿ ಪತ್ನಿ ಕೃತಿಕಾಗೆ ಹೈ ಡೋಸ್ ಅನಸ್ತೇಷಿಯಾ ಕೊಟ್ಟು ಕೊಲೆ ಮಾಡಿದ್ದ. ಆಕೆಗೆ ಹುಷಾರಿರಲಿಲ್ಲ. ಹೀಗಾಗಿ ಸಾವನ್ನಪ್ಪಿದ್ದಾಳೆ ಎಂದೇ ನಂಬಿಸಿದ್ದ. ಕೃತಿಕಾ ತವರು ಮನೆಯವರೂ ಇದನ್ನು ನಂಬಿದ್ದರು.

ಆದರೆ ಪೊಲೀಸರಿಗೆ ಆಗಲೇ ಕೊಂಚ ಅನುಮಾನ ಬಂದಿತ್ತು. ಹೀಗಾಗಿ ಪೋಸ್ಟ್ ಮಾರ್ಟಂ ಮಾಡಬೇಕು ಎಂದಾಗ ಮಹೇಂದ್ರ ಬೇಡ ಎಂದು ನಾಟಕವಾಡಿದ್ದ. ನನ್ನ ಪತ್ನಿಯ ದೇಹ ಕುಯ್ಯುವುದನ್ನು ನೋಡಲು ನನ್ನಿಂದ ಆಗದು. ಹಾಗಾಗಿ ಪೋಸ್ಟ್ ಮಾರ್ಟಂ ಮಾಡಬೇಡಿ ಎಂದಿದ್ದ. ನಂತರ ಪೊಲೀಸರು ಮನವೊಲಿಸಿ ಪೋಸ್ಟ್ ಮಾರ್ಟಂ ಮಾಡಲು ಮುಂದಾದಾಗ ಆ ಸಂದರ್ಭದಲ್ಲಿ ನಾನೂ ಅಲ್ಲಿರಬೇಕು ಎಂದು ಹಠ ಹಿಡಿದಿದ್ದ.

ಗೋಮುಖ ವ್ಯಾಘ್ರ ಅಳಿಯನ ಹುನ್ನಾರ ಗೊತ್ತಿಲ್ಲದೇ ಮಗಳ ಸಾವಿನ ಬಗ್ಗೆ ಪೋಷಕರೂ ದೂರು ನೀಡಲಿಲ್ಲ. ಆದರೆ ಅಲ್ಲಿದ್ದ ಇಂಜೆಕ್ಷನ್, ಔಷದಿ ಬಾಟಲಿಗಳನ್ನು ಪೊಲೀಸರು ಅನುಮಾನದ ಮೇರೆಗೆ ತೆಗೆದುಕೊಂಡು ಹೋಗಿ ಪರೀಕ್ಷೆಗೊಳಪಡಿಸಿದ್ದರು. ಇದೀಗ ಎಫ್ಎಸ್ಎಲ್ ವರದಿಯಲ್ಲಿ ಆಕೆಗೆ ಅನಸ್ತೇಷಿಯಾ ಓವರ್ ಡೋಸ್ ಆಗಿದ್ದರಿಂದಲೇ ಸಾವಾಗಿತ್ತು ಎನ್ನುವುದು ಬಯಲಾದಾಗ ಪೊಲೀಸರಿಗೆ ಇದು ಕೊಲೆ ಎಂಬುದು ಖಚಿತವಾಗಿತ್ತು. ಹೀಗಾಗಿ ಪತ್ನಿಯ ಕೊಲೆ ಮಾಡಿ ಕಳೆದ ಆರು ತಿಂಗಳಿನಿಂದ ಹಾಯಾಗಿದ್ದ ಪತಿ ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನಾರ್ಮಲ್ ಡೆಲಿವರಿ ಸುಲಭವಾಗಿ ಆಗಬೇಕೆಂದರೆ ಈ ಟೆಕ್ನಿಕ್ ಫಾಲೋ ಮಾಡಿ

ಡಾ ಕೃತಿಕಾ ರೆಡ್ಡಿ ಕೇಸ್: ಅಬ್ಬಾ.. ಡಾ ಮಹೇಂದ್ರ ರೆಡ್ಡಿಗಿತ್ತಾ ಇಂಥಾ ಖಯಾಲಿ

ಆರ್ ಎಸ್ಎಸ್ ಜೊತೆ ಸಮರಕ್ಕಿಳಿದ ಪ್ರಿಯಾಂಕ್ ಖರ್ಗೆ ಮೇಲೆ ಪಕ್ಷದೊಳಗೇ ಅಪಸ್ವರ

ಮುಸ್ಲಿಮರ ನಮಾಜಿಗೂ ಪರ್ಮಿಷನ್ ಬೇಕು: ಏನೋ ಮಾಡಲು ಹೋಗಿ ಏನೋ ಆಯ್ತು ಎಂಬ ಪಬ್ಲಿಕ್

ಮುಂದಿನ ಸುದ್ದಿ
Show comments