Select Your Language

Notifications

webdunia
webdunia
webdunia
webdunia

ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು : ಸುಧಾಕರ್

ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು : ಸುಧಾಕರ್
ಚಿಕ್ಕಬಳ್ಳಾಪುರ , ಗುರುವಾರ, 4 ಮೇ 2023 (08:41 IST)
ಚಿಕ್ಕಬಳ್ಳಾಪುರ : ನಾನು ಆಂಜನೇಯನ ಭಕ್ತ ಅಂತ ಹೇಳಿಕೊಂಡರೆ ಸಾಲದು, ಆಂಜನೇಯನ ರೀತಿ ಕೆಲಸ ಮಾಡಬೇಕು ಎಂದು ಸಚಿವ ಸುಧಾಕರ್ ಅವರು ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
 
ಚಿಕ್ಕಬಳ್ಳಾಪುರದ ಮಂಚನಬಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರದ ನಂತರ ಮಾತನಾಡಿದ ಸುಧಾಕರ್, ಹಿಂದೆಂದೂ ಕಾಣದಂತಹ ಸ್ಥಾನಗಳ ಏರಿಕೆ ಆಗಿ ಸ್ವಂತ ಬಲದಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಪರ ಅಲೆ ಇದೆ. ಮೋದಿ ಬಂದ ಕಡೆ ಸ್ಥಾನಗಳ ಏರಿಕೆ ಆಗುತ್ತಿದೆ. ನರೇಂದ್ರ ಮೋದಿಯವರೇ ವಿಶ್ವಾಸ, ಬಿಜೆಪಿಯೇ ಭರವಸೆ. ಡಬಲ್ ಇಂಜಿನ್ ಸರ್ಕಾರ ಡಬಲ್ ಸ್ಪೀಡ್ ಅಭಿವೃದ್ಧಿಗೆ ಜನರಿಗೆ ಬಿಜೆಪಿ ಒಂದೇ ಆಯ್ಕೆ ಎಂದರು.

ಇದೇ ವೇಳೆ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಸಚಿವ ಸುಧಾಕರ್, ದೇಶದ್ರೋಹದ ಕೆಲಸ ಮಾಡಿದ್ರೆ ಅವರನ್ನು ನಿಷೇಧ ಮಾಡಬೇಕು. ದೇಶಪ್ರೇಮಿಯಾಗಿ ಒಳ್ಳೆಯ ಕೆಲಸ ಮಾಡಿದ್ರೆ ಅವರನ್ನು ಯಾಕೆ ನಿಷೇದ ಮಾಡ್ತಾರೆ. ಬಿಜೆಪಿಗೆ ಬಜರಂಗದಳಕ್ಕೂ ಹೋಲಿಕೆ ಮಾಡಲು ಆಗುತ್ತಾ..? ಪಿಎಫ್ ಐ ಉಗ್ರಗಾಮಿಗಳಿಗರ ಸಹಕಾರ ಕೊಡುವ ಸಂಘಟನೆನಾ ನಿಷೇಧ ಮಾಡಿದೆ ಎಂದು ತಿಳಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಅಜಯ್ ಬಂಗಾಗೆ ವಿಶ್ವಬ್ಯಾಂಕ್ ಅಧ್ಯಕ್ಷ ಪಟ್ಟ