Publish Date: Fri, 28 Apr 2023 (13:50 IST)
Updated Date: Fri, 28 Apr 2023 (10:45 IST)
ಬಿಜೆಪಿ ನೇರವಾಗಿ ಬರಲ್ಲ,ಅಡ್ಡದಾರಿಯಲ್ಲಿ ಬಂದು ಅಧಿಕಾರ ಹಿಡಿಯುತ್ತಾರೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಆರೋಪಿಸಿದರು.ಕೆಪಿಸಿಸಿ ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಕ್ಷೆತ್ರದ ನೂರಾರು ಸಂಖ್ಯೆಯಲ್ಲಿ ಬಿಜೆಪಿ -ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆದರು.ಈ ವೇಳೆ ಮಾತನಾಡಿದ ಮೊಯ್ಲಿ ಅವರು ಬಿಜೆಪಿಯ ಅನೇಕ ಜನ ಸ್ಥಳೀಯ ನಾಯಕತ್ವಕ್ಕೆ ಬೇಸತ್ತಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿ ಬಿಜೆಪಿಗೆ ಸೇರಿದಂತ ಡಾ.ಸುಧಾಕರ್,ಅವರ ವಿರುದ್ಧ ಬಿರುಗಾಳಿ ರೀತಿಯ ವಾತಾವರಣ ಇದೆ. ಬಿರುಗಾಳಿಯಲ್ಲಿ ಕೊಚ್ಚಿಹೋಗ್ತಾರೆ ಅನುಮಾನ ಇಲ್ಲ. ಬಿಜೆಪಿ ನಾಯಕರ,ಸುಧಾಕರ್ ವರ್ತನೆಗೆ ರೂಸಿ ಜಿಗುಪ್ಸೆ ನೋಡಿ ಬಂದಿದ್ದಾರೆ.ಸುಧಾಕರ್ ಗೆ ಟಿಕೆಟ್ ಕೊಟ್ಟಾಗ ಭಾಷಣ ಮಾಡೋಕೆ ಗೊತ್ತಿರಲಿಲ್ಲ.ನಮ್ಮ ಒಳ್ಳೆಯ ಅಭ್ಯರ್ಥಿ ಕೊಟ್ಟಿದ್ದೇವೆ.ಈ ಅಭ್ಯರ್ಥಿ ಒಳ್ಳೆಯ ಭಾಷಣಗಾರ. ಡಾ.ಸುಧಾಕರ್ ಸೋಲುವುದು ಖಚಿತ ಎಂದು ಸಚಿವ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.